ಚಾಮರಾಜನಗರ: ಪಾಕಿಸ್ತಾನದ ನೆಲಕ್ಕೆ ನುಗ್ಗಿ ಉಗ್ರರ ನೆಲೆಯನ್ನು ಉಡೀಸ್ ಮಾಡಲು ಭಾರತೀಯ ಸೇನೆಗೆ ಬಲ ತುಂಬುವ ನಿಟ್ಟಿನಲ್ಲಿ ಚಾಮರಾಜನಗರದ ರಾಮಸಮುದ್ರದಲ್ಲಿರುವ ಲಕ್ಷ್ಮೀ ಜನಾರ್ದನ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಇದೇ ವೇಳೆ, ಅರ್ಚಕ ಅನಂತ ಪ್ರಸಾದ್ ವಿಶೇಷ ಪ್ರಾರ್ಥನೆ ಮಾಡಿದರು. ಆ ಸಂದರ್ಭದಲ್ಲಿ ಬಲಭಾಗದಿಂದ ದೇವರು ಹೂವನ್ನು ನೀಡಿದ್ದು, ಭಕ್ತರಲ್ಲಿ ಹರ್ಷ ಮೂಡಿಸಿತು.

ದೇವರು ಬಲಭಾಗದಿಂದ ಹೂ ನೀಡಿ ಸೇನೆಗೆ ಶಕ್ತಿ ತುಂಬಿದ್ದಾನೆ ಎಂದು ಭಕ್ತರು ಖುಷಿ ಪಟ್ಟಿದ್ದಾರೆ. ಅದರಂತೆ ಸೇನೆಯಿಂದ ಮಹತ್ತರವಾದ ಬೆಳವಣಿಗೆಯೇ ಕಂಡು ಬಂದಿದೆ ಎನ್ನಲಾಗಿದೆ. ಇದೀಗ ರಾಜ್ಯಾದ್ಯಂತ ಹಲವಾರು ಕಡೆಗಳಲ್ಲಿ ಸೇನೆಗೆ ಜಯವಾಗಲಿ ಎಂದು ಪೂಜೆ ಪುನಸ್ಕಾರಗಳನ್ನು ಜನರು ಮಾಡುತ್ತಿದ್ದಾರೆ. ದೇವರು ಸತ್ಯಕ್ಕೆ ಜಯ ನೀಡಿಯೇ ನೀಡುತ್ತಾರೆಂದು ನಂಬುವ ಸಂಸ್ಕೃತಿ ನಮ್ಮ ನಾಡಿನದ್ದು.