ಬೆಂಗಳೂರು: ಆಯುರ್ವೇದ ಕ್ಷೇತ್ರದಲ್ಲಿ, ಗಿಡಮೂಲಿಕೆ ಪದಾರ್ಥಗಳ ನಿಯಮಿತ ಬಳಕೆಯಿಂದ,ಸಮೃದ್ಧವಾಗಿರುವ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ವಿವಿಧ ಕಾಯಿಲೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಬಹುದಾಗಿದೆ. ವಿವಿಧ ಗಿಡಮೂಲಿಕೆ ಉತ್ಪನ್ನಗಳ ನಿಯಮಿತ ಬಳಕೆಯು, ಗಮನಾರ್ಹವಾಗಿದೆ ಎಂದು ಸಂಶೋಧನೆ ಹೇಳುತ್ತದೆ. ಇವುಗಳಲ್ಲಿ, ಸಾಮಾನ್ಯವಾಗಿ ತುಳಸಿ ಎಂದು ಕರೆಯಲ್ಪಡುವ (ಒಸಿಮಮ್ ಸ್ಯಾಂಕ್ಟಮ್ ಲಿನ್), ವಿವಿಧ ಕಾಯಿಲೆಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ತುಳಸಿಯು ದೇಹದ ರಸಾಯನಶಾಸ್ತ್ರ, ಚಯಾಪಚಯ ಮತ್ತು ಭಾವನೆಗಳಿಗೆ ಸಂಬಂಧಿಸಿದ ಕಾಯಿಲೆಗಳು,ಹಾಗೂ ಒತ್ತಡವನ್ನು ಕಡಿಮೆ, ಮಾಡಲು ಸಹಾಯ ಮಾಡುವ ಔಷಧೀಯಗುಣಗಳನ್ನು ಹೊಂದಿದೆ.

www.J3Tvkannada.in
ತುಳಸಿ ಎಲೆಗಳ ಏಳು ಅಚ್ಚರಿಯ ಪ್ರಯೋಜನಗಳು:
1.ಉಸಿರಾಟದ ಸಮಸ್ಯೆಗಳು: ಆಯುರ್ವೇದ ಕಫ ನಿವಾರಕ ಮತ್ತು ಕೆಮ್ಮು ಸಿರಪ್ಗಳಲ್ಲಿ ತುಳಸಿಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ತುಳಸಿ ಎಲೆಯ, ಬೇಯಿಸಿದ ನೀರು ಗಂಟಲು ನೋವನ್ನು ಶಮನಗೊಳಿಸುತ್ತದೆ.ತುಳಸಿ ಎಲೆ,ಜೇನುತುಪ್ಪ ಮತ್ತು ಶುಂಠಿಯ ಕಷಾಯವು ಬ್ರಾಂಕೈಟಿಸ್, ಆಸ್ತಮಾ, ಇನ್ಫ್ಲುಯೆನ್ಸ, ಕೆಮ್ಮು ಮತ್ತು ಶೀತಗಳನ್ನು ಗುಣಪಡಿಸುವುದರ ಜೊತೆಗೆ ಉಸಿರಾಟದ ತೂಂದರೆಗಳನ್ನು ನಿವಾರಿಸುತ್ತದೆ.
2.ಮೂತ್ರಪಿಂಡದ ಕಲ್ಲುಗಳು: ತುಳಸಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಆರು ತಿಂಗಳ ಕಾಲ ನಿರಂತರವಾಗಿ ಬಳಸುವುದರಿಂದ ಮೂತ್ರಪಿಂಡಗಳು ಬಲಗೊಳ್ಳುತ್ತವೆ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು, ಸಹಾಯ ಮಾಡುತ್ತದೆ.
3.ಹೃದಯರಕ್ತನಾಳದ ಕಾಯಿಲೆಗಳು: ತುಳಸಿ ಹೃದಯ ಸಂಬಂಧೀ ಸಮಸ್ಯೆಗಳಿಗೆ, ಸಹಾಯ ಮಾಡುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
4.ಮಕ್ಕಳಲ್ಲಿನ ಕಾಯಿಲೆಗಳಿಗೆ ಚಿಕಿತ್ಸೆ: ತುಳಸಿ ಎಲೆಯ ರಸವು ವಾಂತಿ, ಅತಿಸಾರ ಮತ್ತು ಜ್ವರದಂತಹ ಸಾಮಾನ್ಯ, ಮಕ್ಕಳ ಕಾಯಿಲೆಗಳಿಗೆ ರಾಮಬಾಣವಾಗಿದೆ.
5.ಒತ್ತಡ ಮತ್ತು ತಲೆನೋವು: ತುಳಸಿ ಎಲೆಗಳು ಅಡಾಪ್ಟೋಜೆನ್ ಆಗಿ ಕಾರ್ಯನಿರ್ವಹಿಸುತ್ತವೆ, ಒತ್ತಡದ ವಿರುದ್ಧ ಗಮನಾರ್ಹ ರಕ್ಷಣೆ ನೀಡುತ್ತವೆ. ದಿನಕ್ಕೆ ಎರಡು ಬಾರಿ 12 ತುಳಸಿ ಎಲೆಗಳನ್ನು ಅಗಿಯುವುದರಿಂದ ಒತ್ತಡ ಕಡಿಮೆಯಾಗುತ್ತದೆ.
6.ಬಾಯಿಯ ಸೋಂಕುಗಳು: ತುಳಸಿ ಎಲೆಗಳನ್ನು ಅಗಿಯುವುದರಿಂದ ಬಾಯಿಯ ಹುಣ್ಣು ಮತ್ತು ಸೋಂಕುಗಳು ಗುಣವಾಗುತ್ತವೆ.
7.ಹಲ್ಲುಗಳ ಅಸ್ವಸ್ಥತೆಗಳು: ತುಳಸಿ ಎಲೆಗಳನ್ನು ಪುಡಿಮಾಡಿ ಬಿಸಿಲಿನಲ್ಲಿ ಒಣಗಿಸಿದ ನಂತರ ಹಲ್ಲು ತೊಳೆಯಲು ಬಳಸಬಹುದು. ತುಳಸಿ ಮತ್ತು ಸಾಸಿವೆ ಎಣ್ಣೆಯಿಂದ ತಯಾರಿಸಿದ ಪೇಸ್ಟ್ ಅನ್ನು ದಂತ ಪೇಸ್ಟ್ ಆಗಿ ಬಳಸಬಹುದು. ಇದು ಒಸಡುಗಳ ಮಸಾಜ್, ಬಾಯಿಯ ದುರ್ವಾಸನೆ ಮತ್ತು ದಂತಗಳನ್ನು ಕಾಂತಿಯುತವಾಗಿರಿಸುತ್ತದೆ.