
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ತಾವರಗಟ್ಟೆ ಬಳಿ ಭಾನುವಾರ ಬೆಳಿಗ್ಗೆ ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿ ಹೊತ್ತೊಯ್ಯುವಾಗ ಸಪಾರಿಗೆ ತೆರಳಿದ್ದ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ.

j3tvkannada
ತಾವರಗಟ್ಟೆ ವಲಯದಲ್ಲಿ ಪ್ರವಾಸಿಗರು ಅರಣ್ಯ ಇಲಾಖೆಯ ವಾಹನಗಳಲ್ಲಿ ಸಫಾರಿಗೆ ತೆರಳಿದ್ದಾಗ ಹುಲಿ ಎದುರಾಗಿದ್ದು ಜಿಂಕೆಯನ್ನು ಕಚ್ಚಿಕೊಂಡು ರಸ್ತೆ ದಾಟಿಕೊಂಡು ಅರಣ್ಯದೊಳಗೆ ಹೋಗಿದೆ. ಈ ದೃಶ್ಯಗಳನ್ನು ಪ್ರವಾಸಿಗರು ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಪುಳಕಿತರಾಗಿದ್ದಾರೆ.