
ಮೈಸೂರು: ನಗರದ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜಿನಲ್ಲಿ ಈಚೆಗೆ ಸಂಪ್ರತಿಭೋತ್ಸವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

j3tvkannada
ವಿಶೇಷ ಆಹ್ವಾನಿತರಾಗಿದ್ದ. ಕಾಲೇಜಿನ ಹಳೆಯ ವಿದ್ಯಾರ್ಥಿನಿ ಡಾ.ವೀಣಾ ಭಾರತಿ ಅವರು ತಮ್ಮ ತಾಯಿ ಲಕ್ಷ್ಮಿ ಅಶ್ವತ ಹೆಸರಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮೂರು ಬೆಳ್ಳಿ ಪದಕಗಳು ಹಾಗೂ ನಗದು ಬಹುಮಾನಗಳನ್ನು ವಿತರಿಸಿದರು.
ಬಳಿಕ ಮಾತನಾಡಿ, ನಮ್ಮಲ್ಲಿನ ಅವಗುಣಗಳನ್ನು ಅರಿತು, ತ್ವರಿತವಾಗಿ ತಿದ್ದುಕೊಂಡು ಉತ್ತಮ ವ್ಯಕ್ತಿಗಳಾಗಲು ಸದಾ ಪ್ರಯತ್ನಿಸಬೇಕು ಎಂದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಪತಿ ಎಂ.ಎ.ಶೇಖರ್ ಉದ್ಘಾಟಿಸಿದರು. ಪ್ರಾಂಶುಪಾಲೆ ಎಂ.ದೇವಿಕಾ, ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಆರ್.ನರಸಿಂಹ, ಆಡಳಿತ ಮಂಡಳಿ ಸದಸ್ಯ ಎಸ್.ಎಲ್.ರಾಮಚಂದ್ರ ಉಪಸ್ಥಿತರಿದ್ದರು.