
ಬೆಂಗಳೂರು ಗ್ರಾಮಾಂತರ: ಮುಸ್ಲಿಂ ಸೇರಿದಂತೆ ಇತರೆ ಅಲ್ಪಸಂಖ್ಯಾತರಲ್ಲೂ ಹತ್ತಾರು ಒಳಪಂಗಡಗಳು ಇವೆ. ಜಾತಿಗಣತಿಯಲ್ಲಿ ಇವುಗಳನ್ನು ಸಹ ಪ್ರತ್ಯೇಕವಾಗಿ ಸಮೀಕ್ಷೆಯಲ್ಲಿ ಗುರುತಿಸದೆ ಲಿಂಗಾಯಿತರು, ಒಕ್ಕಲಿಗರಲ್ಲಿರುವ ಒಳಪಂಗಡಗಳನ್ನು ಮಾತ್ರ ಪ್ರತ್ಯೇಕವಾಗಿ ನಮೂದಿಸಿ, ಸಂಖ್ಯೆಯನ್ನು ಕಡಿಮೆ ತೋರಿಸಲು ಹಾಗೂ ಒಗ್ಗಟ್ಟನ್ನು ಹೊಡೆಯಲು ರಾಜ್ಯದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ದೂರಿದರು.

j3tvkannada
ಜಾತಿಗಣತಿ, ಸಾಮಾಜಕ, ಶೈಕ್ಷಣಿಕ ಸಮೀಕ್ಷೆಯ ವರದಿ ಹತ್ತಾರು ಬಾರಿ ಸಚಿವ ಸಂಪುಟದ ಮುಂದೆ ಬಂದಿದ್ದರು ಸಹ ಇದನ್ನು ಜಾರಿಗೊಳಿಸಲು ಸಚಿವ ಸಂಪುಟದಲ್ಲೇ ವಿರೋಧ ಇದೆ. ಈ ವರದಿ ವೈಜ್ಞಾನಿಕವಾಗಿಲ್ಲ. ಶೇ 30 ಜನರ ಮನೆಗಳಿಗೆ ಭೇಟಿ ನೀಡಿ ಮಾಹಿತಿಯನ್ನೇ ಸಂಗ್ರಹಿಸಿಲ್ಲ. ಅಲ್ಲದೆ ಕೆಲ ಜಾತಿಯಲ್ಲಿನ ಒಳಪಂಗಡಗಳನ್ನು ಮಾತ್ರ ಸಮೀಕ್ಷೆಯಲ್ಲಿ ನಮೋದಿಸಲಾಗಿದೆ. ಇದರಿಂದ ಸಹಜವಾಗಿಯೇ ಈ ಜಾತಿಗಳ ಜನ ಸಂಖ್ಯೆಯಲ್ಲಿ ಭಾರಿ ಕುಸಿತ ಕಾಣಬಹುದಾಗಿದೆ. 2015ರಲ್ಲಿ ಸಿದ್ದರಾಮಯ್ಯ ಅವರು ಸರ್ಕಾರ ನಡೆಸಿರುವ ಸಮೀಕ್ಷೆಯ ಉದ್ದೇಶ ಒಂದು ಸಮುದಾಯವನ್ನು ಮಾತ್ರ ಓಲೈಕೆ ಮಾಡಲು, ಎನ್ನುವುದು ಸ್ಪಷ್ಟವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕೇಂದ್ರ ಸರ್ಕಾರಕ್ಕೆ ಜನಗಣತಿ ಹಾಗೂ ಜಾತಿಗಣತಿಯನ್ನು ನಡೆಸುವ ಅಧಿಕಾರ ಸಂವಿಧಾನ ಬದ್ದವಾಗಿ ಹೊಂದಿದೆ. ಹಾಗಾಗಿಯೇ ಕೇಂದ್ರದಲ್ಲಿನ ಸರ್ಕಾರ ನಡೆಸುತ್ತಿರುವ ಜಾತಿ, ಜನಗಣತಿ ಸಮೀಕ್ಷೆಯು ಆಧುನಿಕ ತಂತ್ರಜ್ಞಾನ ಹಾಗೂ ಬದಲಾಗಿರುವ ಕಾಲಮಾನಕ್ಕೆ ತಕ್ಕಂತೆ ವೈಜ್ಞಾನಿಕ ಮಾಹಿತಿ ಆಧಾರದ ಮೇಲೆ ನಡೆಸಲಿದೆ. ಇದರಿಂದ ಎಲ್ಲಾ ಧರ್ಮ, ಜಾತಿಯ ಜನರಿಗು ಸಾಮಾಜಿಕ ನ್ಯಾಯ ದೊರೆಯಲಿದೆ. ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಐತಿಹಾಸಿಕ ನಿರ್ಣಯವಾಗಿದೆ ಎಂದರು.
ನಿವೃತ್ತ ಐ.ಎ.ಎಸ್ ಅಧಿಕಾರಿ ಲಕ್ಷ್ಮಿನಾರಾಯಣ್, ಬಿ.ಜೆ.ಪಿ ಮಹಿಳಾ ಮೋರ್ಚಾ ಮಾಜಿ ರಾಜ್ಯ ಕಾರ್ಯದರ್ಶಿ ನಿಶ್ಚಿತಾ, ಎಸ್ಪಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಣ್ಣ ಇನ್ನು ಮುಂತಾದವರು ಇದ್ದರು.