
ಬಾಗಲಕೋಟೆ: ತಾಲ್ಲೂಕಿನ ಹಳಿಂಗಳಿ ಗ್ರಾಮದ ವಾರ್ಡ್ ಸಂಖ್ಯೆ 6 ರಲ್ಲಿ ಸರ್ಕಾರಿ ಸರ್ವೇ ಸಂಖ್ಯೆ 142/*ರಲ್ಲಿ ಅಂದಾಜು 15 ಅಡಿ ರಸ್ತೆ ಸ್ಥಳೀಯ ನಿವಾಸಿಗಳು ಅತಿಕ್ರಮಣ ಮಾಡಿರುವುದನ್ನು, ಹಳಿಂಗಳಿ ಗ್ರಾಮ ಪಂಚಾಯಿತಿ ಮನವಿ ಮೇರೆಗೆ ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರ ನಡೆಯಿತು.

j3tvkannada
ಬೆಳಿಗ್ಗೆಯೇ ಜೆ.ಸಿ.ಬಿ ಸದ್ದು ಮಾಡುತ್ತಾ, ಗ್ರಾಮದ ಕಂಬಾರ ಮನೆಯಿಂದ ಶಾಂತಿನಾಥ ಪಾಟೀಲ ಅವರ ಮನೆಯ ಬಳಿಯ ಮುಂಭಾಗದ ರಸ್ತೆವರೆಗೆ ಅಕ್ರಮವಾಗಿ ನಿರ್ಮಿಸಿದ್ದ ದನದ ಸೆಡ್, ಕಾಂಪೌಂಡ್, ಕಲ್ಲಿನ ರಾಶಿ, ತಿಪ್ಪೆಗುಂಡಿಗಳನ್ನು ತೆರವುಗೊಳಿಸಲಾಯಿತು.
ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಗ್ರಾಮ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಕವಟಗೊಪ್ಪ, ಪಿ.ಡಿ.ಒ ತೇಜಸ್ವಿನಿ ಮರೆಗುದ್ದಿ, ಪಿ.ಎಸೈ ಅಪ್ಪು ಐಗಳಿ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ ನಂದೆಪ್ಪನವರ ಕೂಡ ಕಾರ್ಯಾಚರಣೆಗೆ ಬೆಂಬಲಿಸಿದ್ದರು. ಪೊಲೀಸ್ ಬಂದೋಬಸ್ತ್ನಲ್ಲಿ ಕಾರ್ಯಾಚರಣೆ ಜರುಗಿತು.