ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿಯಲ್ಲಿ ಒಂದೇ ದಿನ 4 ಕರುಗಳನ್ನು ಕೊಂದಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಬೋನಿನಲ್ಲಿ ಚಿರತೆಯನ್ನು ಕಂಡು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಗುಂಡ್ಲು ಪೇಟೆಯಲ್ಲಿ ಚಿರತೆಗಳ ಕಾಟದಿಂದ ಜನ ಆಗಾಗ ಸಂಕಷ್ಟಕ್ಕೆ ಒಳಗಾಗುತ್ತಲೇ ಇರುತ್ತಾರೆ. ಹೊಲಕ್ಕೆ ನುಗ್ಗುವ ಚಿರತೆಗಳ ಭಯದಿಂದ ಜನ ಓಡಾಡಲು ಭಯಪಡುವಂತಾಗಿದೆ.

ಚಿರತೆ ಉಪಟಳದಿಂದ ಜನರು ಆತಂಕಗೊಂಡಿದ್ದರು. ಗ್ರಾಮದ ನಾಗಪ್ಪ ಎಂಬವರ ಜಮೀನಿನಲ್ಲಿ ಚಿರತೆಯ ಸೆರೆಗೆ ಬೋನ್ ಇರಿಸಲಾಗಿತ್ತು. ಕೊಟ್ಟಿಗೆ ಮಾದರಿ ಬೋನಿಗೆ ಐನಾತಿ ಚಿರತೆ ಸೆರೆ ಸಿಕ್ಕಿದೆ. ಕಳೆದ 15 ದಿನಗಳ ಹಿಂದೆಯಷ್ಟೇ ನಾಗಪ್ಪ ಎಂಬವರಿಗೆ ಸೇರಿದ 4 ಕರುಗಳನ್ನು ಚಿರತೆ ಕೊಂದಿತ್ತು. ಬಂಡೀಪುರದ ಮದ್ದೂರು ವಲಯ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಬೋನಿರಿಸಿದ್ದರು.