
ಬಾಗಲಕೋಟೆ: ಮನುಷ್ಯನನ್ನು ಹೆಜ್ಜೆ, ಹೆಜ್ಜೆಗೂ ಸಂಸ್ಕರಿಸಿ, ಶುದ್ದೀಕರಿಸಿ ಪರಿಪೂರ್ಣತೆಯತ್ತ ಕೊಂಡೊಯ್ಯಲು ಸಂಸ್ಕಾರ ಅಗತ್ಯವಾಗಿದೆ ಎಂದು ನಾಲತವಾಡದ ಬ್ರಹ್ಮಾಂಡ ಭೇರಿಮಠದ ಸುಧೀಂದ್ರ ಸ್ವಾಮೀಜಿ ಹೇಳಿದರು. ಬಾಗಲಕೋಟೆ ತಾಲ್ಲೂಕು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ, ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘ, ವಿಶ್ವಕರ್ಮ ತರುಣ ಸಂಘ, ವಿಶ್ವಕರ್ಮ ಸಮಾಜ ಬಡಿಗತನ ಕಾರ್ಮಿಕರ ಸಂಘ, ಕಾಳಿಕಾಂಬಾ ಮಹಿಳಾ ಮಂಡಳ, ವಿಶ್ವಕರ್ಮ ಸಮಾಜ ಸಂಘ ಸಹಕಾರದೊಂದಿಗೆ ವಿದ್ಯಾಗಿರಿಯ 13ನೇ ರಸ್ತೆಯಲ್ಲಿರುವ ಕಾಳಿಕಾಂಬಾ ದೇವಸ್ಥಾನದಲ್ಲಿ ಗುರುವಾರ ನಡೆದ ಪ್ರಥಮ ಸಾಮೂಹಿಕ ಉಪನಯನ ಹಾಗೂ ಧಾರ್ಮಿಕ ಸಭೆ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

j3tvkannada
ಸಾವಿರಾರು ವರ್ಷಗಳ ಹಿಂದೆಯೇ ಅಲೌಕಿಕ ಬುದ್ದಿಸಂಪನ್ನರಾಗಿದ್ದ ಭಾರತದ ಋಷಿ ಮುನಿಗಳು ತಮ್ಮ ತಪೋ ಪ್ರಭಾವದಿಂದ ಮನುಷ್ಯ ಜೀವನಕ್ಕೆ ಸರಿಯಾದ ಮಾರ್ಗಗಳನ್ನು ತೋರಿಸಿ ಕೊಟ್ಟಿದ್ದಾರೆ. ಮನುಷ್ಯನ ಇಹ-ಪರ ಎರಡನ್ನೂ ಸಮನ್ವಯಗೊಳಿಸಿದ್ದಾರೆ. ಮನುಷ್ಯನ ಪರಿಪೂರ್ಣತೆಗೆ ಹುಟ್ಟಿನಿಂದ ಮರಣದವರೆಗೂ ಅನೇಕ ಸಂಸ್ಕಾರಗಳನ್ನು ನೀಡಿದ್ದಾರೆ. ಅದರಲ್ಲಿ ಈ ಉಪನಯನವು ಒಂದು ಎಂದರು. ಸಾನ್ನಿಧ್ಯ ವಹಿಸಿದ್ದ ವಿಶ್ವನಾಥ ಸ್ವಾಮೀಜಿ ಮಹಾಪುರುಷ ಮಾತನಾಡಿ, ಮನುಷ್ಯ ತನ್ನ ಬೌದ್ಧಿಕ ಬಲದಿಂದ ವಿಶ್ವದ ವಿವಿಧ ವಸ್ತು ಶಕ್ತಿಗಳ ರಹಸ್ಯ ಭೇದಿಸುತ್ತಾ ತನ್ನ ಬಾಳ್ವೆಯನ್ನು ಸುಗಮಗೊಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾನೆ. ಇವೆಲ್ಲವೂ ಗುರು-ಹಿರಿಯರು ನೀಡಿದ ಸಂಸ್ಕಾರಗಳಿಂದ ಸಾಧ್ಯವಾಗಿವೆ ಎಂದರು.
ವಿದ್ಯಾಗಿರಿ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ವಸಂತರಾವ್ ಕಮ್ಮಾರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಿಶ್ವರ್ಕಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರ ಅಗಳತಕಟ್ಟಿ ಮಾತನಾಡಿ, ಸಮಾಜದ ವಿವಿಧ ಸಂಘಟನೆಗಳ ಸಹಕಾರದಿಂದ 25 ವಟುಗಳ ಸಾಮೂಹಿಕ ಉಚಿತ ಬ್ರಹ್ಮೋಪದೇಶ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ಸಾಮೂಹಿಕ ಉಪನಯನ ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು.
ನಿಮ್ಮ ಕೆವೈಸಿ ಅನ್ನು ನವೀಕರಿಸಿ ಖಾತೆಯನ್ನು ಸಕ್ರಿಯಗೊಳಿಸಿ. ಬಸವರಾಜ ಬಡಿಗೇರ, ಯಂಕಪ್ಪ ಬಡಿಗೇರ, ನಾಗರಾಜ ಕಮ್ಮಾರ, ಬಸವರಾಜ ಬರಗಿ, ಪ್ರಕಾಶ ಪತ್ತಾರ, ಜಗನ್ನಾಥ ಪತ್ತಾರ, ಮಹೇಶಕುಮಾರ ಪತ್ತಾರ, ಭೀಮಪ್ಪ ಬಡಿಗೇರ, ರಾಘವೇಂದ್ರ ಕಮ್ಮಾರ, ಮಹಾದೇವ ಪತ್ತಾರ, ಅಪ್ಪಾಸಾಬ್ ಬಡಿಗೇರ, ನಿರ್ಮಲಾ ಪತ್ತಾರ, ವಿಜಯಲಕ್ಷ್ಮೀ ಪತ್ತಾರ, ಕಾಳಪ್ಪ ಬಡಿಗೇರ, ರುಕಮಣ್ಣ ಪಂಚಾಳ ಭಾಗವಹಿಸಿದ್ದರು. ವೀರೇಶಾಚಾರ್ಯ ದೇವಲಾಪುರ ಅವರ ಪೌರೋಹಿತ್ಯದಲ್ಲಿ 25 ಜನ ವಟುಗಳ ಸಾಮೂಹಿಕ ಬ್ರಹ್ಮೋಪದೇಶ ಜರುಗಿತು.