ಮಂಗಳೂರು: 1865 ರಲ್ಲಿ, ಜೇಡಿಮಣ್ಣಿನ ಹೆಂಚು ಮತ್ತು ಇಟ್ಟಿಗೆ ಉದ್ಯಮವು, ದೇಶದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಸ್ಥಾಪನೆಯಾಗಿತ್ತು. ಇಲ್ಲಿ ತಯಾರಾಗುವ ಹೆಂಚುಗಳು ದೇಶಾದ್ಯಂತ, ಮಾತ್ರವಲ್ಲದೇ ವಿದೇಶಗಳಲ್ಲೂ, ʼಮಂಗಳೂರು ಹೆಂಚುʼ ಎಂದೇ ಪ್ರಸಿದ್ಧಿ ಪಡೆದಿತ್ತು.

ಮಂಗಳೂರಿನಲ್ಲಿ 80, ಕುಂದಾಪುರದಾಲ್ಲಿ 17, ಉತ್ತರಕನ್ನಡ ಜಿಲ್ಲೆಯಲ್ಲಿ 16 ಕಾರ್ಖಾನೆಗಳು ಕಾರ್ಯಾಚರಿಸುತ್ತಿದವು. ಆದರೆ ಆವೆ ಮಣ್ಣು ಹಾಗೂ ಕಾರ್ಮಿಕರ ಕೊರತೆಯಿಂದಾಗಿ, ಉತ್ತರಕನ್ನಡ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಕುಂದಾಪುರದಲ್ಲಿ ಕೇವಲ 10, ಮಂಗಳೂರಿನಲ್ಲಿ 4 ಕಾರ್ಖಾನೆಗಳು ಮಾತ್ರ ಕಾರ್ಯಾಚರಿಸುತ್ತಿವೆ.
ಇದರಿಂದಾಗಿ ಹೆಂಚು ಉದ್ಯಮದ 2 ಸಾವಿರ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಇತ್ತೀಚೆಗೆ ಜನ ವೆಲ್ ಎಜುಕೇಟೆಡ್ ಆಗಿ ಸಾಫ್ಟ್ವೇರ್, ಡಾಕ್ಟರ್, ಇಂಜೀನಿಯರ್ಸ್ ಮುಂತಾದ ದೊಡ್ಡ ದೊಡ್ಡ ಹುದ್ದೆಗಳನ್ನೇ ಅರಸಿ ಹೋಗುವುದರಿಂದ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯುಂಟಾಗಿದೆ.
ಅಲ್ಲದೆ ಈ ಆಧುನಿಕ ಕಾಲಘಟ್ಟದಲ್ಲಿ ಹೆಚ್ಚಿನವರು ಫ್ಯಾಷನೇಬಲ್ ಆಗಿರುವ ಮೋಲ್ಡ್ ಮನೆಗಳಿಗೇ ಮೊರೆ ಹೋಗುತ್ತಾರೆ. ಇದರಿಂದ ಆರೋಗ್ಯಯುತವಾದ ಹಾಗೂ ನೈಸರ್ಗಿಕವಾಗಿ ತಯಾರಾಗುವ ಹೆಂಚು ಇಟ್ಟಿಗೆಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದೇ ಹೇಳಬಹುದು,