
ವಿಜಯಪುರ: ಹಿಂದೂ ಹುಲಿ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಬಿಜೆಪಿಗೆ ಬರುವಂತಾಗಲಿ, ನಾನು ಪ್ರೀತಿಸಿದ ಹುಡುಗಿ ನನಗೆ ಸಿಗುವಂತಾಗಲಿ, ನನ್ನನ್ನು ಪ್ರಸಿದ್ಧ ಯು ಟ್ಯೂಬರ್ ಮಾಡು, ಒಂದು ವರ್ಷದಿಂದ ಅನುಭವಿಸಿದ ಕಷ್ಟ ನೋವು ಮಾಯ ಮಾಡು, ಸರ್ಕಾರಿ ನೌಕರಿ ಕೊಡಿಸು, ನಾನು ಹಾಲಿನ ಅಭಿಷೇಕ ಮಾಡುವೆ, ಉಪವಾಸ ಮಾಡುವೆ, ಎಂಬ ಕೋರಿಕೆಗಳಿದ್ದವು.

j3tvkannada
ಹುಂಡಿಗಳು ತುಂಬಿದ ಕಾರಣ, 1 ವರ್ಷ 9 ತಿಂಗಳ ಬಳಿಕ ಗುರುವಾರ ದೇವಸ್ಥಾನದಲ್ಲಿನ ಮೂರು ಹುಂಡಿಯನ್ನು ಭಕ್ತರ ಸಮ್ಮುಖದಲ್ಲಿ ತೆರೆಯಲಾಯಿತು. ಇಲ್ಲಿನ ಹನುಮಂತ ದೇವಸ್ಥಾನ ‘ಜಾಗೃತ ದೇವರು’ ಎಂದೇ ಹೆಸರಾಗಿದೆ. ಅದಕ್ಕಾಗಿ ಭಕ್ತರು ಹುಂಡಿಯಲ್ಲಿ ಬೇಡಿಕೆಯ ಪತ್ರ ಬರೆಯುವುದು ವಾಡಿಕೆ. ಭಕ್ತರ ಹಲವು ತರೇಹವಾರಿ ಬೇಡಿಕೆಯುಳ್ಳ ಪತ್ರಗಳು ಪತ್ತೆಯಾಗಿವೆ. ಮೂರು ಹುಂಡಿಗಳಲ್ಲಿ ಹಣದ ಜತೆಗೆ ಹರಿದ ನೋಟು, ಚಿನ್ನ, ಬೆಳ್ಳಿಯ ಆಭರಣಗಳು, ಹಳೆಯ 2000 ನೋಟುಗಳು ಕೂಡಾ ಪತ್ತೆಯಾಗಿವೆ.
ಯಲಗೂರ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಯಲಗೂರೇಶ್ವರ ಅನ್ನಪ್ರಸಾದ ಸೇವಾ ಸಮಿತಿಯ ಸದಸ್ಯರು, ಅರ್ಚಕರು ಗ್ರಾಮದ ಪ್ರಮುಖರು, ಯಲಗೂರು, ನಿಡಗುಂದಿ, ಬಾಗಲಕೋಟೆಯ ಕೆನರಾ, ಯೂನಿಯನ್ ಬ್ಯಾಂಕ್ ಗಳ ಸಿಬ್ಬಂದಿಗಳು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಜನರು ಹುಂಡಿ ಹಣ ಎಣಿಕೆಯಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಅನಂತ ಓಂಕಾರ, ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ, ಶ್ರೀಶೈಲ ಡೆಂಗಿ, ಗುಂಡಪ್ಪ ಪೂಜಾರ, ಗುಂಡಪ್ಪ ತಳವಾರ, ಗೋಪಾಲ ಗದ್ದನಕೇರಿ, ಮಹಾಂತೇಶ ಡೆಂಗಿ, ಆನಂದ ಪೂಜಾರ, ಭೀಮಣ್ಣ ಪೂಜಾರಿ, ಸಂತೋಷ ಪೂಜಾರ, ಗುಂಡುರಾವ ಕುಲಕರ್ಣಿ, ಗುರುರಾಜ ಪರ್ವತಿಕರ, ಜಿ.ವಿ ಪೂಜಾರ ಮೊದಲಾದವರು ಇದ್ದರು.