
ಯಾದಗಿರಿ: ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ರಂಗಂಪೇಟೆ-ತಿಮ್ಮಾಪುರದ ಅಂಬಾಭವಾನಿ ದೇವಸ್ಥಾನದ 55ನೇ ವರ್ಷದ ವರ್ಧಂತಿ ಉತ್ಸವ ವಿಜೃಂಭಣೆಯಿಂದ ಜರುಗಿತು.

j3tvkannada
ಅಖಂಡ ಭಜನೆ, ಸಂಗೀತ ಸೇವೆ ಮತ್ತು ಶರಣಪ್ಪ ಕಮ್ಮಾರ ಅವರಿಂದ ದಾಸವಾಣ ನಡೆಯಿತು. ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ದೇವಿಯ ಅಷ್ಟೋತ್ತರ ಪಾರಾಯಣ ನಡೆಯಿತು.
ರಂಗಂಪೇಟೆಯ ಹನುಮನ ದೇವಸ್ಥಾನದಿಂದ ಅಂಬಾಭವಾನಿ ದೇವಸ್ಥಾನದವರೆಗೆ ಸುಮಂಗಲಿಯರಿಂದ ಪೂರ್ಣ ಕುಂಭ ಪಲ್ಲಕ್ಕಿ ಮೆರವಣಿಗೆ ನಡೆಯಿತು. ನಂತರ ಹೋಮ ಹವನ ಜರುಗಿತು. ಅಲಂಕಾರ ಪೂಜೆ, ಮಂಗಳಾರುತಿ, ತೀರ್ಥಪ್ರಸಾದ ವಿನಿಯೋಗವಾಯಿತು.
ಭಾವಸಾರ ಕ್ಷತ್ರಿಯ ಸಮಾಜದ ತಾಲ್ಲೂಕು ಅಧ್ಯಕ್ಷ ಅರುಣಕುಮಾರ ಪುಲ್ಪೆ, ಶಂಕರರಾವ್, ಮಹೇಂದ್ರಕರ್, ಭೂಮದೇವ ಮಹೇಂದ್ರಕರ್, ಏಳುಕೋಟೆಪ್ಪ ಪುಲ್ಪೆ, ರಾಜು ಪುಲ್ಪೆ, ಮೋಹನರಾವ ಮಾಳದಕರ್, ಶ್ರೀನಿವಾಸ ದಾಯಿಪುಲೆ, ಸುರೇಶ ಅಂಬೂರೆ, ನಾಗೇಶ ಅಂಬೂರೆ, ಮುರುಳಿ ಅಂಬೂರೆ, ಮಹಾಂತೇಶ ಶಹಾಪುರಕರ್, ಶರಣಬಸವ ಕೊಂಗಂಡಿ, ಮಹೇಶ ಗೋಗಿ, ಸೂಗಮ್ಮ ಕೊಂಗಂಡಿ, ಆನಂದ ಪರ್ತಾನಿ, ತಿರುಪತಿ ಹೂಗಾರ, ಕೃಷ್ಣ ಪತಂಗೆ, ಭೀಮಣ್ಣ ಪತಂಗೆ, ಗೋಪಾಲ ಮಾಳದಕರ್, ಪವನ ವಿಭೂತೆ, ದತ್ತು ಪುಲ್ಪೆ, ಲಲಿತ ಭಂಡಾರೆ, ಮುರುಳಿ ಅಂಬೂರೆ, ಮಧುಕರ ಮಾಳದಕರ್, ಓಂಪ್ರಕಾಶ ಪಾಡಮುಖಿ, ರಾಜು ಟೇಲರ್, ಅಂಬಾದಾಸ ಅಂಬೂರೆ ಮತ್ತು ಇನ್ನಿತರು ಇದ್ದರು.