
ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಏಳನೇ ಸುತ್ತಿನ ಕಾಲು ಮತ್ತು ಬಾಯಿ ರೋಗಗಳಿಗೆ ವಿಶೇಷ ಚಿಕಿತ್ಸೆ ನೀಡುವ ಲಸಿಕಾ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಾಯಿತು.

j3tvkannada.in
ವೈದ್ಯಾಧಿಕಾರಿ ರೂಪಾ ಕಡಸಾನಿ ಮಾತನಾಡಿ, ಜೂನ್ 6 ರವರೆಗೆ ಸತತವಾಗಿ ನಡೆಯಲಿರುವ ಈ ಲಸಿಕಾ ಅಭಿಯಾನದಲ್ಲಿ ಚಿಮ್ಮಡ ಹಾಗೂ ಯರಗಟ್ಟಿ ಗ್ರಾಮಗಳ ಅಂದಾಜು 6,500 ಜಾನುವಾರುಗಳಿಗೆ ಕಾಲು ಮತ್ತು ಬಾಯಿ ರೋಗನಿರೋಧಕ ಲಸಿಕೆ ನೀಡುವ ಗುರಿ ನಿಗದಿಪಡಿಸಿಕೊಳ್ಳಲಾಗಿದೆ. ರೈತರು, ಸಾರ್ವಜನಿಕರು ತಮ್ಮ ಸಾಕು ಪ್ರಾಣಿ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ ಕಾರ್ಯಕ್ರಮದ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಆನಂದ ಕವಟಿ, ಪ್ರಭು ಮುಧೋಳ, ಬಾಳು ಬ್ಯಾಕೋಡ, ಸುರೇಶ ಪೂಜಾರಿ, ತುಕಾರಾಮ ಚಾಲನೆ ನೀಡಿದರು. ಆನಂದ ಕವಟಿ, ಪ್ರಭು ಮುಧೋಳ, ಬಾಳು ಬ್ಯಾಕೋಡ, ಸುರೇಶ ಪೂಜಾರಿ, ತುಕಾರಾಮ ದೊಡಮನಿ, ಪಶುವೈದ್ಯ ಪರೀಕ್ಷಕ ಎಸ್.ಕೆ.ಕೋರಿ, ಉಮೇಶ ಸವದಿ, ಪಶು ಸಖಿ ಸುನಿತಾ ಕೋಳಿ ಇದ್ದರು.