
ಕೊಡಗು: ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿ, ಕೊಡಗಿನಲ್ಲಿ ಕಾರ್ಯಕ್ರಮಗಳಿಗೆ ಜನ ಸೇರಿವುದಿಲ್ಲ ಎನ್ನುವ ಮಾತಿದೆ. ಆದರೆ ಮುದ್ದಂಡ ಹಪ್ ಹಾಕಿ ಉತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು ಸಂತಸ ತಂದಿದೆ. ಹಲವು ಸವಾಲುಗಳ ನಡುವೆಯೂ ಮುದ್ದಂಡ ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

j3tvkannada
ತಾಂತ್ರಿಕ ತಂಡದ ಸಹಕಾರದಿಂದ ಆನ್ಲೈನ್ ನೋಂದಣಿಗೆ ಅವಕಾಶ ಕಲ್ಪಿಸಿದ್ದರಿಂದ ದಾಖಲೆಯ 396 ತಂಡಗಳು ನೋಂದಾಯಿಸಿಕೊಂಡು ಹಾಕಿ ಹಬ್ಬ ಯಶಸ್ವಿಯಾಗಿದೆ. ಮುದ್ದಂಡ ಕಪ್ ಹಾಕಿ ಉತ್ಸವದ ಪ್ರಯುಕ್ತ ಕರಡ ಗ್ರಾಮದಿಂದ ‘ಕ್ರೀಡಾ ಜ್ಯೋತಿ’ ಯನ್ನು ಐನ್ಮನೆಗಳಿಗೆ ಕೊಂಡೊಯ್ದು 128 ಕಿ.ಮೀ. ಓಟದ ಮೂಲಕ ಕ್ರಮಿಸಲಾಯಿತು. “ಕ್ರೀಡಾ ಜ್ಯೋತಿ’ಯ ಸಂಭ್ರಮದ ಮೆರವಣಿಗೆ ಮೈದಾನದ ವರೆಗೆ ಸಾಗಿತು ಎಂದರು. ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಶ್ವಾನ ಪ್ರದರ್ಶನ, ಮೈಂಡ್ ಎಂಡ್ ಮ್ಯಾಟರ್ ಸಂಸ್ಥೆಯ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಓಟ, ತೆಂಗಿನಕಾಯಿಗೆ ಗುಂಡಿಹೊಡೆಯುವ ಸ್ಪರ್ಧೆ, ರಸ ಪ್ರಶ್ನೆ ಸ್ಪರ್ಧೆ, ಸೈಕ್ಲೋಥಾನ್ ಸೇರಿದಂತೆ ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು ಎಂದು ತಿಳಿಸಿದರು. ಕೊಡವ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ವಿಶೇಷ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 5ಎ ಸೈಡ್ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ವಿಯಾಗಿದ್ದೇವೆ. ಪುರುಷರಷ್ಟೇ ಮಹಿಳೆಯರಿಗೂ ಸಮಾನ ಅವಕಾಶವನ್ನು ಕಲ್ಪಿಸುವ ಮೂಲಕ ಮುದ್ದಂಡ ಹಾಕಿ ಉತ್ಸವ ಮಹಿಳೆರನ್ನು ಮುಂಚೂಣಿಗೆ ಕೊಂಡೊಯ್ಯುವ ಕೆಲಸ ಮಾಡಿದೆ ಎಂದರು. ಕೊಡವ ಹಾಕಿ ಅಕಾಡೆಮಿ, ಕೊಡವ ಕುಟುಂಬಸ್ಥರು, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಸರ್ವರು ಹಾಕಿ ಉತ್ಸವದ ಯಶಸ್ಸಿಗಾಗಿ ಸಹಕರಿಸಿದ್ದಾರೆ ಎಂದು ಮುದ್ದಂಡ ರಶಿನ್ ಸುಬ್ಬಯ್ಯ ನೆನಪಿಸಿಕೊಂಡರು.