
ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪದ ಆಧಾರದ ನೇಮಕಾತಿಯಲ್ಲಿ ನಿರ್ವಾಹಕ ಮತ್ತು ಚಾಲಕ ನೌಕರಿಗೆ ಸೇರಲು ಬಹುತೇಕರು ಒಪ್ಪುತ್ತಿಲ್ಲ. ಭದ್ರತಾ ಸಿಬ್ಬಂದಿ (ಸೆಕ್ಯುರಿಟಿ ಗಾರ್ಡ್), ಕಿರಿಯ ಸಹಾಯಕ (ಜೂನಿಯರ್ ಅಸಿಸ್ಟೆಂಟ್) ಹುದ್ದೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಎನ್.ಡ.ಬ್ಲ್ಯು.ಕೆ.ರ್.ಟಿ.ಸಿ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿವೆ. ಅರ್ಜಿದಾರರು ಬೇಡಿದ ಹುದ್ದೆಗಳು ಖಾಲಿ ಇಲ್ಲದ್ದಕ್ಕೆ ಅನುಕಂಪ ಆಧಾರ ನೇಮಕಾತಿಯ (ಸರ್ಕಾರಿ ನೌಕರ ಮೃತಪಟ್ಟರೆ, ಅವಲಂಬಿತರೊಬ್ಬರನ್ನು ನೌಕರಿಗೆ ನೇಮಿಸಿಕೊಳ್ಳುವುದು) 800 ಅರ್ಜಿಗಳು ಬಾಕಿ ಇವೆ.

j3tvkannada
ವೃತ್ತಿ ತರಬೇತಿ, ಭಾರಿ ವಾಹನ ಚಾಲನಾ ಪರವಾನಗಿ (ಎಚ್ವಿಡಿಎಲ್) ಕೊಡಿಸುವುದಾಗಿ ಸಂಸ್ಥೆಯವರೇ ಹೇಳಿದರೂ ಬಹಳಷ್ಟು ಅರ್ಜಿದಾರರು ಚಾಲಕ, ನಿರ್ವಾಹಕರಾಗಲು ಒಪ್ಪಿಲ್ಲ. ಬೇಡಿದ ಹುದ್ದೆಯ ನಿರೀಕ್ಷೆಯಲ್ಲೇ ಇದ್ದಾರೆ. ಭದ್ರತಾ ಸಿಬ್ಬಂದಿ ಹುದ್ದೆ ಖಾಲಿ ಇಲ್ಲ ಎಂದು ಎನ್ಡಬ್ಲ್ಯುಕೆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಹೇಳಿದರು. ಸರ್ಕಾರಿ ಕೆಲಸ ಸಿಗುವುದು ಕಷ್ಟ, ಕಂಡಕ್ಟರ್ ಕೆಲಸವಿದೆ. ಅದನ್ನೇ ಮಾಡುವಂತೆ ಸಚಿವ ಸಂತೋಷ್ ಲಾಡ್ ಜನತಾದರ್ಶನದಲ್ಲಿ ಹೇಳಿದರು. ಆ ಕೆಲಸ ಒಪ್ಪದೇ ಬೇರೆ ವಿಧಿಯಿಲ್ಲ ಎಂದು ಅನುಕಂಪ ಆಧಾರದ ನೌಕರಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬರು ತಿಳಿಸಿದರು. ಕಚೇರಿಯಲ್ಲಿ ಕಾರ್ಯನಿರ್ವಹಿಸುವ (ಬೆಳಿಗ್ಗೆ 10 ರಿಂದ ಸಂಜೆ 5ವರೆಗೆ ಕೆಲಸ) ನೌಕರಿ ಅಪೇಕ್ಷಿಸುವವರು ಹೆಚ್ಚು. ಹೆಚ್ಚು ಸವಾಲು, ಕಷ್ಟ ಇಲ್ಲದಿರುವ ಕೆಲಸ ಬಯಸುತ್ತಾರೆ. ಚಾಲಕ, ನಿರ್ವಾಹಕ ನೌಕರಿಯಲ್ಲಿ ಹೆಚ್ಚು ಜವಾಬ್ದಾರಿ ಇರುತ್ತದೆ. ಅದಕ್ಕೆ ಭದ್ರತಾ ಸಿಬ್ಬಂದಿ, ಕಿರಿಯ ಸಹಾಯಕ ಉದ್ಯೋಗಕ್ಕೆ ಸೇರಲು ಹೆಚ್ಚು ಆಸಕ್ತಿ ಹೊಂದಿದ್ದಾರೆ’ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು ತಿಳಿಸಿದರು.