
ತುಮಕೂರು: ಸುಳ್ಳು ಮಾಹಿತಿ ನೀಡಿ ಬಿಲ್ ಕಲೆಕ್ಟರ್ ಹುದ್ದೆಗೆ ನೇಮಕವಾಗಿದ್ದ ಆರೋಪದಲ್ಲಿ ತಾಲ್ಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿಯ ರಾಜೇಶ್ ಅವರನ್ನು ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ.

j3tvkannada
ರಾಜೇಶ್ ಸುಳ್ಳು ಮಾಹಿತಿ ನೀಡಿ ಬಿಲ್ ಕಲೆಕ್ಟರ್ ಹುದ್ದೆ ಪಡೆದುಕೊಂಡಿರುವುದನ್ನು ಖಂಡಿಸಿದ ಹಂದಲಗೆರೆ ಗ್ರಾಮದ ಕಾಂತರಾಜು, ದೇವರಾಜು ಸೇರಿದಂತೆ ಇತರರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.
ಪಂಚಾಯಿತಿ ನೋಡಲ್ ಅಧಿಕಾರಿ ರೇಷ್ಮೆ ಇಲಾಖೆಯ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಚೌಡನಕುಪ್ಪೆ ಅವರು ಪರಿಶೀಲನೆ ನಡೆಸಿ ವರದಿ ಸಹ ನೀಡಿದ್ದರು. ವರದಿ ಆಧರಿಸಿ ಅಮಾನತು ಮಾಡಲಾಗಿದೆ.