
ಶಿವಮೊಗ್ಗ: ಸಾರ್ವಜನಿಕ ಕ್ರೀಡಾಂಗಣದಲ್ಲಿ ಏಪ್ರಿಲ್ 25ರಿಂದ 27ರವರೆಗೆ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ ‘ಭಾರತ್ ಜೋಡೋ ಚಾಂಪಿಯನ್ಸ್ ಟ್ರೋಫಿ’ ಹಮ್ಮಿಕೊಂಡಿದ್ದೇವೆ ಎಂದು ಸ್ಪೋರ್ಟ್ ಮತ್ತು ಕಲ್ಬರಲ್ ಕ್ಲಬ್ ಸಂಚಾಲಕ ಅಶ್ವಲ್ ಗೌಡ ಹೇಳಿದರು.

j3tvkannada
19 ತಂಡಗಳು ಭಾಗವಹಿಸಲಿದ್ದು ಹೊರ ರಾಜ್ಯ, ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವರು. ವಿಶೇಷವಾಗಿ ಶ್ರೀಲಂಕಾದ ವೀನಸ್ ಬೊಲಾಂಗ್ಲಾ ತಂಡ ಟೂರ್ನಿಯ ಮೆರಗು ಹೆಚ್ಚಿಸಲಿದೆ. ಪ್ರಥಮ ಬಹುಮಾನ ₹ 3,33,333 ಮತ್ತು ರನ್ನರ್ ಅಪ್ ₹ 2,22,222 ಹಾಗೂ ಪಂದ್ಯಶ್ರೇಷ್ಟ ಬಹುಮಾನ ನೀಡುತ್ತಿದ್ದೇವೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉದ್ಯಮಿ ಅಬ್ದುಲ್ ಕಲಾಂ ಅಜಾದ್, ಶಶಿಧರ್ ಹುಂಚದಕಟ್ಟೆ ಟೂರ್ನಿ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಬೆಳಗಾವಿ ಸಂಸದ ಮೃಣಾಲ್ ಹೆಬ್ಬಾಳ್ವರ್, ಶಾಸಕರಾದ ಆರಗ ಜ್ಞಾನೇಂದ್ರ, ಗೋಪಾಲಕೃಷ್ಣ ಬೇಳೂರು, ಬಸವರಾಜು ವಿ. ಶಿವಗಂಗಾ, ಕೆ.ಎಸ್.ಆನಂದ, ಡಿ.ಜಿ. ಶಾಂತನಗೌಡ, ಬಿ.ಕೆ. ಸಂಗಮೇಶ್ವರ, ಟಿ.ಡಿ.ರಾಜೇಗೌಡ, ಬಲ್ಕಿಸ್ ಬಾನು ಭಾಗವಹಿಸಲಿದ್ದಾರೆ ಎಂದರು. ಮುಖಂಡರಾದ ಆದರ್ಶ ಹುಂಚದಕಟ್ಟೆ, ಪೂರ್ಣೇಶ್ ಕೆಳಕೆರೆ, ಶ್ರೇಯಸ್ ರಾವ್, ಸುದರ್ಶನ, ಧ್ರುವ ಕುಮಾರ್, ಆಸಿಫ್ ಇನ್ನುಮುಂತಾದವರು ಇದ್ದರು.