
ರಾಮನಗರ: ಹಾರೋಹಳ್ಳಿಯ ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ದೇಗುಲದ ಬಾಗಿಲ ಬೀಗ ಮುರಿದು ಹುಂಡಿ ಮತ್ತು ತಾಯಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳ್ಳರು ಕದ್ದಿರುವ ಘಟನೆ ನಡೆದಿದೆ.

j3tvkannada
ಹುಂಡಿಯನ್ನು ಹೊತ್ತೊಯ್ದಿರುವ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ತೆಗೆದು ಪಕ್ಕದಲ್ಲಿರುವ ಹಾಸ್ಟೆಲ್ ಹಿಂದೆ ಖಾಲಿ ಹುಂಡಿಯನ್ನು ಬಿಸಾಡಿದ್ದಾರೆ. ಜತೆಗೆ ಸುಮಾರು 40 ಗ್ರಾಂ ತೂಕವಿರುವ ಚಿನ್ನದ ಸರವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಇತ್ತೀಚೆಗೆ ಚಾಮುಂಡೇಶ್ವರಿ ಜಾತ್ರೆ ನಡೆದಿದ್ದು, ಹುಂಡಿಯಲ್ಲಿ ಅಂದಾಜು ₹2 ಲಕ್ಷ ಹಾಗೂ ಸುಮಾರು ₹3 ಲಕ್ಷ ಬೆಲೆ ಬಾಳುವ ಚಿನ್ನದ ಸರ ಸೇರಿದಂತೆ ಒಟ್ಟು ಅಂದಾಜು ₹5 ಲಕ್ಷ ದೇವಾಲಯದಲ್ಲಿ ಕಳ್ಳತನವಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.