
ಕೊಡಗು:ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ವತಿಯಿಂದ ಕೂಡಿಗೆ ಸರ್ಕಲ್ನಲ್ಲಿ ಹಮ್ಮಿಕೊಂಡಿದ್ದ ಮಾರಣಾಂತಿಕ, ಮಾದಕತೆ ವಿರುದ್ಧ ಜನಜಾಗೃತಿ ಹಾಗೂ ಪ್ರತಿಜ್ಞಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

j3tvkannada
ಮಾದಕ ವ್ಯಸನ ಜಾಗತಿಕ ಸಮಸ್ಯೆಯಾಗಿದ್ದು, ಎದುರಿಸುವುದೇ ದೊಡ್ಡ ಸವಾಲಾಗಿದೆ. ಮಾದಕ ವಸ್ತುಗಳ ಬಳಕೆ ಬಹು ದೊಡ್ಡ ವ್ಯಸನವಾಗಿದೆ. ಇದು ಯುವ ಸಮುದಾಯವನ್ನು ಹಾಳು ಮಾಡುತ್ತಿದ್ದು, ಯಾವ ಧರ್ಮೀಯರೂ ಈ ವ್ಯಸನದಿಂದ ಮುಕ್ತರಾಗಿಲ್ಲ ಎಂದು ಭಾರಧ್ವಜ್ ಆತಂಕ ವ್ಯಕ್ತಪಡಿಸಿದರು.
ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ಮಾದಕ ವ್ಯಸನದ ವಿರುದ್ಧ ಬಹು ದೊಡ್ಡ ಹೋರಾಟ ಮಾಡುತ್ತಿದ್ದು, ಯಶಸ್ವಿಯೂ ಆಗುತ್ತಿದ್ದಾರೆ ಎಂದು ಶ್ಲಾಘಿಸಿದರು. ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದೆ. ಇದು ಬಹು ದೊಡ್ಡ ಮಾಫಿಯಾ ಆಗಿದ್ದು, ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಮಾದಕ ವ್ಯಸನದ ಗೀಳು ಹಚ್ಚಿಸಿ ಬಿಟ್ಟರೆ ಅಂತಹ ಮಕ್ಕಳು ದಾಸರಾಗಿ ರಾಷ್ಟ್ರ ದ್ರೋಹವೆಸಗುವ ಮಟ್ಟಕ್ಕೂ ಹೋಗುತ್ತಾರೆ . ಮಾದಕ ವ್ಯಸನ ಸಿನಿಮಾ ನಟರು ಹಾಗೂ ಕ್ರೀಡಾಪಟುಗಳನ್ನೂ ಬಿಟ್ಟಿಲ್ಲ ಎಂದರು.
ಸುಳ್ಯದ ಬೆಳ್ಳಾರೆಯ ಧಾರ್ಮಿಕ ಮುಖಂಡ ಇಟ್ಬಾಲ್ ಬಾಳಿಲ ಮಾತನಾಡಿ, ಮಾದಕತೆ ಎಂಬ ಡ್ರಗ್ಸ್ ಮಾಫಿಯಾ ಶಾರೀರಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಹು ದೊಡ್ಡ ಸಮಸ್ಯೆಯಾಗಿದೆ. ಭವಿಷ್ಯದಲ್ಲಿ ಪಂಜಾಬ್ಗಿಂತ ಕರ್ನಾಟಕ ಮಾದಕ ವ್ಯಸನದಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವ ಅಪಾಯವಿದೆ. ಪ್ರತಿ ಗ್ರಾಮಗಳಲ್ಲೂ ಮಾದಕ ವಸ್ತುಗಳ ಚಟ ಮನೆ ಮಾಡಿ ನಿಂತಿದೆ. ಮಕ್ಕಳನ್ನು ನಿಯಂತ್ರಿಸಿದರೆ ಈ ವ್ಯಸನಕ್ಕೆ ತಡೆ ಸಾಧ್ಯವಿದೆ. ಈ ದೇಶದ ಸಂಸ್ಕೃತಿಗೆ ಮಾದಕ ವ್ಯಸನ ಕಪ್ಪು ಚುಕ್ಕೆಯಾಗಿದೆ. ಇಂತಹ ಕೆಟ್ಟ ಘಟನೆಗಳು ಹೆಚ್ಚಾಗುವ ಮುನ್ನ ಎಲ್ಲರೂ ಧರ್ಮಾತೀತವಾಗಿ ಜಾಗೃತೆ ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಎಸ್ಕೆಎಸ್ಎಸ್ಎಫ್ ರಾಜ್ಯ ಘಟಕದ ಮುಖಂಡರಾದ ತಮ್ಮಿಕ್ ಧಾರಿಮಿ, ಕೂಡಿಗೆ ಜುಮ್ಮಾ ಮಸೀದಿ ಧರ್ಮಗುರು ಹೈದರ್ ಆಲಿ ಸಾದಿ ಮಾತನಾಡಿದರು. ಕೂಡಿಗೆ ಎಸ್ವೈಎಸ್ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಸೀದಿ ಅಧ್ಯಕ್ಷ ಯೂಸುಫ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಅನಂತು, ಪ್ರದೀಪ್ ಪಾಲ್ಗೊಂಡಿದ್ದರು