
ಗದಗ: ಅನ್ನದಾನೀಶ್ವರ ಸ್ವಾಮೀಜಿ ಸೇರಿದಂತೆ ತಾಲ್ಲೂಕಿನ ಎಲ್ಲ ಸಾಹಿತ್ಯಾಸಕ್ತರ ಸಹಕಾರದಿಂದ ಕಸಾಪ ನೂತನ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದೆ. ಇನ್ನುಳಿದ ಕಾಮಗಾರಿ ಪೂರ್ಣಗೊಳ್ಳಲು ಸಾಹಿತ್ಯಾಸಕ್ತರು ನೆರವು ನೀಡಬೇಕು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ಮನವಿ ಮಾಡಿಕೊಂಡರು. ಇಲ್ಲಿಯ ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಸಾಪ ಆಜೀವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಸಾಹಿತ್ಯಾಸಕ್ತರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ನೆರವಿನೊಂದಿಗೆ ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ ತಿಂಗಳಿನಲ್ಲಿ ನೂತನ ಭವನದ ಲೋಕಾರ್ಪಣೆ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

j3tvkannada
ಕಸಾಪ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮುಧೋಳ ಮಾತನಾಡಿ, ಅನ್ನದಾನೀಶ್ವರ ಸ್ವಾಮೀಜಿ ಅವರು ಉಚಿತವಾಗಿ ನೀಡಿರುವ ಎಂಟು ಗುಂಟೆ ವಿಶಾಲ ಜಾಗದಲ್ಲಿ ದಾನಿಗಳ ನೆರವಿನಿಂದ ನೂತನ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗುತ್ತಿದೆ. 25,000 ದೇಣಿಗೆ ನೀಡುವವರ ಚಿತ್ರಗಳನ್ನು ಭವನದಲ್ಲಿ ಹಾಕಲಾಗುವುದು ಎಂದು ತಿಳಿಸಿದರು. ಪುರಸಭೆ ಉಪಾದ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ನಿರ್ಮಾಣ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನವು ವಿವಿಧ ಸಭೆ, ಸಮಾರಂಭಗಳನ್ನು ಹಮ್ಮಿಕೊಳ್ಳಲು ಅನಕೂಲವಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಶೋಭಾ ಮೇಟಿ, ನಿವೃತ್ತ ಪ್ರಾಚಾರ್ಯ ಎಸ್.ಬಿ.ಕೆ.ಗೌಡರ, ಕಸಾಪ ನಿಕಟಪೂರ್ವ ಅದ್ಯಕ್ಷ ಎಸ್.ಬಿ.ಹಿರೇಮಠ, ನಿವೃತ್ತ ಉಪನ್ಯಾಸಕ ಎಸ್.ಆರ್.ಬಸಾಪುರ, ರೈತ ಮುಖಂಡ ಸುರೇಶ ಹಲವಾಗಲಿ, ವೀರೇಶ ಬಾಗೋಡಿ ಮುತಾಂದವರು ಸೂಚನೆ ನೀಡಿದರು. ಕಸಾಪ ಕಾರ್ಯದರ್ಶಿ ವೀಣಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಗೌರವಾಧ್ಯಕ್ಷ ಶಂಕರ ಕುಕನೂರ ವಂದಿಸಿದರು. ಸುರೇಶ ಭಾವಿಹಳ್ಳಿ, ಕೃಷ್ಣಮೂರ್ತಿ ಸಾಹುಕಾರ, ಕಾಶೀನಾಥ ಬಿಳಿಮಗ್ಗದ, ಸಿ.ಕೆ.ಗಣಪ್ಪನವರ, ಎಂ.ಐ.ಮುಲ್ಲಾ, ಎನ್.ಎನ್.ಕಲಕೇರಿ, ಶಿವಪುತ್ರ ಇಟಗಿ, ಆರ್.ವೈ.ಪಾಟೀಲ, ಮಂಜುಳಾ ಇಟಗಿ ಇದ್ದರು.