
ಕೋಲಾರ: ಕ್ಯಾಸಂಬಳ್ಳಿ ಗ್ರಾಮದ ಕಾಶಿ ವಿಶ್ವನಾಥಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

j3tvkannada
ಪುಪ್ಪ ಪಲ್ಲಕ್ಕಿ ಉತ್ಸವ ಸೇರಿದಂತೆ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವಗಳ ಮೆರವಣಿಗೆ ಮಾಡಲಾಯಿತು. ಕರಗ ಪೂಜಾರಿ ಕೋಲಾರ ನವೀನ್, ಕರಗವನ್ನು ಹೊತ್ತು ಗೋವಿಂದ ನಾಮ ಸ್ಮರಣೆಯಲ್ಲಿ ದೇವಾಲಯದಿಂದ ಹೊರ ಬಂದು ತಮಟೆ ಶಬ್ದಕ್ಕೆ ನೃತ್ಯ ಪ್ರದರ್ಶಿಸಿ ಭಕ್ತಾದಿಗಳ ಗಮನ ಸೆಳೆದರು.
ಪಂಚಮಸಾಲಿ ಸಮುದಾಯದಲ್ಲಿ ಕ್ಯಾಸಂಬಳ್ಳಿ ಯುವ ಮುಖಂಡ ವಿಕ್ಕಿ ರೆಡ್ಡಿ ನೇತೃತ್ವದಲ್ಲಿ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ತೆಲುಗು ಭಾಷೆಯ ಹಾಸ್ಯ ಕಲಾವಿದರಿಂದ ಜಾತ್ರಾ ಮಹೋತ್ಸವಕ್ಕೆ ಮೆರುಗು ನೀಡಲಾಯಿತು. ಟಿ.ಕೆ.ಆರ್ ಫೌಂಡೇಶನ್ ಕಿರಣ್ ಕುಮಾರ್ ರೆಡ್ಡಿ, ಮಾಜಿ ಶಾಸಕ ಎಂ.ನಾರಾಯಣ ಸ್ವಾಮಿ, ದಶರಥ್ ರೆಡ್ಡಿ, ಪ್ರತಾಪ್, ಶಿವಾರೆಡ್ಡಿ, ಸುಬ್ರಮಣಿ, ಮಹೇಶ್ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.