
ಕೊಪ್ಪಳ: ಮಹಾರಾಣ ಪ್ರತಾಪ್ ಸಿಂಗ್ ವೃತ್ತದ ಸಮೀಪದ ಎನ್.ಆರ್ ರೈಸ್ ಮಿಲ್ನಲ್ಲಿ ಅಪರೇಟರ್ ಕೆಲಸ ಮಾಡುವ ಯುವಕ, ಅಕ್ಕಿ ಸಂಗ್ರಹದ ಟ್ಯಾಂಕ್ ಒಡೆದು, ಅಕ್ಕಿಯಡಿ ಸಿಲುಕಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

j3tvkannada
ಮೆಹಬೂಬ ನಗರದ ನಿವಾಸಿ ಸೈಯದ್ ಅರ್ಶದ್ (27) ಮೃತರು. ಎಂದಿನಂತೆ ಅಕ್ಕಿ ಸಂಗ್ರಹದ ಟ್ಯಾಂಕ್ನಿಂದ ಅಕ್ಕಿ ಹೊರ ಬಿಡುವ ವೇಳೆ ತಾಂತ್ರಿಕ ದೋಷ ಸಂಭವಿಸಿ, ಸುಮಾರು 250 ಟನ್ ಅಕ್ಕಿ ಸಂಗ್ರಹದ ಟ್ಯಾಂಕ್ ಒಡೆದು ಅವಘಡ ಸಂಭವಿಸಿದೆ.
ಕೂಡಲೇ ಅಗ್ನಿಶಾಮಕ ದಳ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದರು. 3 ಜೆ.ಸಿ.ಬಿ, 1 ಕ್ರೇನ್ ಸಹಾಯದಿಂದ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಅಕ್ಕಿ ತೆರವು ಮಾಡಿದ ನಂತರ ಯುವಕನ ಮೃತದೇಹ ಪತ್ತೆಯಾಗಿದೆ.