
ರಾಯಚೂರು: ಸಿಂಧನೂರು ತಾಲ್ಲೂಕಿನ ಅವಳಿ ಗ್ರಾಮಗಳಾದ ಬೊಮ್ಮನಾಳ ಮತ್ತು ಚಿರತ್ನಾಳ ಮಧ್ಯದಲ್ಲಿರುವ ಹಳ್ಳದ ಸೇತುವೆ ನಿರ್ಮಾಣ ಪ್ರಾರಂಭವಾಗಿ ಮೂರು ವರ್ಷ ಗತಿಸಿದೆ. ಒಂದೆರಡು ಪಿಲ್ಲರ್ಗಳು ಹಾಕಿದ್ದನ್ನು ಹೊರತುಪಡಿಸಿದರೆ ಸೇತುವೆ ನಿರ್ಮಾಣ ಕಾರ್ಯ ಸಂಪೂರ್ಣ ನನೆಗುದಿಗೆ ಬಿದ್ದಿದೆ.

j3tvkannada
ಬೊಮ್ಮನಾಳ ಗ್ರಾಮದಿಂದ ಚಿರತ್ನಾಳಗೆ ಹೋಗಲು ಹಳ್ಳಕ್ಕೆ ಈ ಹಿಂದೆ ಇದ್ದ ಕಲ್ಲು ಜೋಡಣೆಯ ಕಿರು ಸೇತುವೆಯನ್ನು ತೆಗೆದು ಎತ್ತರದ ಸೇತುವೆ ನಿರ್ಮಾಣ ಮಾಡಲು ಮೂರು ವರ್ಷದ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡರ ಅಧಿಕಾರ ಅವಧಿಯಲ್ಲಿ ದೇವರಗುಡಿ, ಪಗಡದಿನ್ನಿ, ಬೊಮ್ಮನಾಳ ಮತ್ತು ಚಿರತ್ನಾಳ ನಡುವಿನ ಹಳ್ಳದ ಸೇತುವೆಗಳಿಗೆ ₹10 ಕೋಟಿ ಬಿಡುಗಡೆ ಮಾಡಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ದೇವರಗುಡಿ ಮತ್ತು ಪಗಡದಿನ್ನಿ ಸೇತುವೆಗಳು ಪೂರ್ಣಗೊಂಡು 1 ವರ್ಷ ಗತಿಸಿದೆ. ಪ್ರಸ್ತುತ ಸೇತುವೆಗೆ ಮಾತ್ರ ಕಾಯಕಲ್ಪ ಸಿಗುತ್ತಿಲ್ಲ. ಈ ಸೇತುವೆಗೆ ₹3 ಕೋಟಿಯನ್ನು ಕಾಯ್ದಿರಿಸಿ ಬಿಜಾಪೂರ ಮೂಲದ ಶಂಕ್ರಗೌಡ ಹೊಸಮನಿ ಎಂಬ ವ್ಯಕ್ತಿ ಗುತ್ತಿಗೆ ಪಡೆದಿದ್ದಾರೆ.