
ಬಳ್ಳಾರಿ: ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ 1 ಲಕ್ಷ ಮೆಟ್ರಿಕ್ ಟನ್ (10 ಲಕ್ಷ ಕ್ವಿಂಟಲ್) ಬಿಳಿ ಜೋಳವನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಜಿಲ್ಲೆಗಳಿಗೆ ಹೇರಿರುವ ಮಿತಿ ಸಮಸ್ಯೆ ಸೃಷ್ಟಿಸಿದೆ. ಸರ್ಕಾರದ ಮಿತಿಗೂ, ವಾಸ್ತವದಲ್ಲಿ ರೈತರು ಬೆಳೆದಿರುವ ಬೆಳೆಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ನೋಡಲ್ ಏಜೆನ್ಸಿಯಾಗಿದೆ. ಪ್ರತಿ ರೈತರಿಂದ ಎಕರೆಗೆ 20 ಕ್ವಿಂಟಲ್ನಂತೆ ಗರಿಷ್ಠ 150 ಕ್ವಿಂಟಲ್ ಬಿಳಿಜೋಳ ಖರೀದಿಸಲು ಉದ್ದೇಶಿಸಲಾಗಿದೆ.

j3tvkannada
ಆದರೆ, ಖರೀದಿ ವೇಳೆ ಬಳ್ಳಾರಿಗೆ 40 ಸಾವಿರ ಕ್ವಿಂಟಲ್, ರಾಯಚೂರಿಗೆ 80 ಸಾವಿರ ಕ್ವಿಂಟಲ್ ಸೇರಿ ಬೇರೆ ಬೇರೆ ಜಿಲ್ಲೆಗಳಿಗೆ ಬೇರೆ ಬೇರೆ ಪ್ರಮಾಣದ ಮಿತಿ ನಿಗದಿ ಮಾಡಲಾಗಿದೆ. ಬೆಂಬಲ ಬೆಲೆಯಡಿ ಮಾಲ್ದಂಡಿ ಜೋಳ ಪ್ರತಿ ಕ್ವಿಂಟಲ್ಗೆ ₹3,421, ಹೈಬ್ರಿಡ್ ಜೋಳ ಪ್ರತಿ ಕ್ವಿಂಟಲ್ಗೆ ₹3,371 ನಿಗದಿ ಮಾಡಲಾಗಿತ್ತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ನೋಡಲ್ ಏಜೆನ್ಸಿಯಾಗಿದೆ. ಪ್ರತಿ ರೈತರಿಂದ ಎಕರೆಗೆ 20 ಕ್ವಿಂಟಲ್ನಂತೆ ಗರಿಷ್ಠ 150 ಕ್ವಿಂಟಲ್ ಬಿಳಿಜೋಳ ಖರೀದಿಸಲು ಉದ್ದೇಶಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 59,305 ಎಕರೆ (24 ಸಾವಿರ ಹೆಕ್ಟೇರ್) ಪ್ರದೇಶದಲ್ಲಿ ಹೈಬ್ರಿಡ್ ಜೋಳ ಬೆಳೆಯಲಾಗಿದೆ. ಒಂದು ಎಕರೆಗೆ 28 ರಿಂದ 30 ಕ್ವಿಂಟಲ್ ಇಳುವರಿ ಸಿಕ್ಕಿದೆ. ಎಕರೆಗೆ ಕನಿಷ್ಠ 20 ಕ್ವಿಂಟಲ್ ಎಂದು ಲೆಕ್ಕ ಹಾಕಿದರೂ, ಅಂದಾಜು 11.80 ಲಕ್ಷ ಕ್ವಿಂಟಲ್ ಬೆಳೆ ಕೈ ಸೇರಿದೆ. ಆದರೆ, ಸರ್ಕಾರ ಜಿಲ್ಲೆಯಲ್ಲಿ ಖರೀದಿಸುತ್ತಿರುವುದು ಕೇವಲ 40 ಸಾವಿರ ಕ್ವಿಂಟಲ್ (4 ಸಾವಿರ ಟನ್).
ರಾಜ್ಯದಲ್ಲಿ ಮಾಲ್ದಂಡಿ ಮತ್ತು ಹೈಬ್ರಿಡ್ ಜೋಳ ಎಂಬ ಎರಡು ವಿಧದ ಬೆಳೆಗಳನ್ನು ಬೆಳೆಯಲಾಗುತ್ತದೆ. ವಿಜಯಪುರ, ಬಾಗಲಕೋಟೆ ಸೇರಿ ಇತರ ಜಿಲ್ಲೆಗಳಲ್ಲಿ ಮಾಲ್ದಂಡಿ ಹೆಚ್ಚು ಬೆಳೆಯಲಾಗುತ್ತದೆ. ಮಾಲ್ದಂಡಿ ಜೋಳದ ಮಾರುಕಟ್ಟೆ ದರವು ಬೆಂಬಲ ಬೆಲೆಗಿಂತಲೂ ಅಧಿಕವಿದೆ. ಅದಕ್ಕೆ ಸರ್ಕಾರಕ್ಕೆ ಮಾರುವವರಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಮಾರಲೆಂದೇ ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಹೈಬ್ರಿಡ್ ಜೋಳವನ್ನು ಹೆಚ್ಚು ಬೆಳೆಯಲಾಗುತ್ತದೆ.
ಈ ಹಿಂದೆ ಯಾವ ವರ್ಷವೂ ಹೀಗೆ ಮಿತಿ ಹೇರಿರಲಿಲ್ಲ. ಈ ಹಿಂದಿನ ಮುಂಗಾರು ಬೆಳೆಗೂ ಮಿತಿ ಇರಲಿಲ್ಲ. ಇದೇ ಮೊದಲ ಬಾರಿಗೆ ಇಂಥ ಮಿತಿ ಹಾಕಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಳ್ಳಾರಿ ಜೋಳ ನೋಂದಣಿ ಪ್ರಕ್ರಿಯೆ ಮುಗಿದಿರುವುದು ತಿಳಿದು ರೈತರು ಎ.ಪಿ.ಎಂ.ಸಿ ಆವರಣದ ಖರೀದಿ ಕೇಂದ್ರಕ್ಕೆ ಬೀಗ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು. ನೋಂದಣಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು ಹಾಗೂ ಖರೀದಿಯಲ್ಲಿ ಜಿಲ್ಲೆಗೆ ಮಿತಿ ವಿಧಿಸಿರುವುದನ್ನು ವಿರೋಧಿಸಿದರು.