
ಶಿವಮೊಗ್ಗ : ಏನೂ ಅರಿಯದ ಐದು ವರ್ಷದ ಪುಟ್ಟ ಬಾಲಕಿ ಮನೆ ಆವರಣದಲ್ಲಿ ಆಟವಾಡುತ್ತಿದ್ದ ವೇಳಿ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿಯನ್ನು ಭಾನುವಾರ ಎನ್ಕೌಂಟರ್ ಮಾಡಲಾಗಿದೆ. ನಗರದ ಹೊರ ವಲಯದ ತಾರಿಹಾಳ ಕೇಳ ಸೇತುವೆ ಬಳಿ ಆರೋಪಿ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದರು. ಬಿಹಾರದ ಪಟನಾ ಮೂಲದ ರಿತೇಶ್ ಕುಮಾರ್ (35) ಎನ್ಕೌಂಟರ್ಗೆ ಬಲಿಯಾದ ಆರೋಪಿ. ಈ ಘಟನೆ ಬಗ್ಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.

j3tvkannada
ಬಾಲಕಿ ಮೇಲೆ ನಡೆದ ಅತ್ಯಾಚಾರದ ಕೃತ್ಯ ಖಂಡನೀಯವಾಗಿದೆ. ಅತ್ಯಾಚಾರಿಗೆ ಕಠಿಣ ಶಿಕ್ಷೆ ಕೊಡಬೇಕಿದೆ. ಅದು ಎನ್ ಕೌಂಟರ್ ರೂಪದಲ್ಲಿ ನೀಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಮಕ್ಕಳ ವಿಚಾರ ಬಂದಾಗ ಎಲ್ಲರೂ ಇಂತಹ ಕೆಲಸಗಳನ್ನ ಖಂಡಿಸಬೇಕು. ಕೇವಲ ಕಾನೂನು ಪಾಲಿಸುವುದು ಒಂದೇ ಅಲ್ಲ, ಸಾರ್ವಜನಿಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿದೆ. ಘಟನೆಯನ್ನ ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರೂ ಖಂಡಿಸಬೇಕು.
ಇಂತಹ ಘಟನೆ ಆಗದಂತೆ ಸರ್ಕಾರದ ಜೊತೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು, ಮುಗ್ಧ ಮಕ್ಕಳಿಗೆ ತಿಳುವಳಿಕೆ ನೀಡುವ ಕೆಲಸ ಮಾಡಬೇಕು, ಪೋಷಕರು, ಶಿಕ್ಷಕರು, ಸರ್ಕಾರ ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ ಎಂದರು. ಇನ್ನು ಯಾರೇ ಕಾರ್ಮಿಕರು ರಾಜ್ಯಕ್ಕೆ ಬಂದರೆ ಕಾನೂನು ಚೌಕಟ್ಟು ರೂಪಿಸಬೇಕಿದೆ ಎಂದರು.
.