

j3tvkannada
ಹಾವೇರಿ : ಮಹಾಂತಸ್ವಾಮಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ (ಎನ್.ಎಸ್.ಎಸ್) ವಾರ್ಷಿಕ ವಿಶೇಷ ಶಿಬಿರವನ್ನು ಮತ್ತಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಹಂಸಬಾವಿ ಗ್ರಾಮ ಪಂಚಾಯಿತಿ ಹಾಗೂ ಹಾವೇರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಶಿಬಿರವನ್ನು ಅಧ್ಯಕ್ಷ ಪ್ರಭುಗೌಡ ಪಾಟೀಲ ಇತ್ತೀಚೆಗೆ ಉದ್ಘಾಟಿಸಿದರು. ಯುವಕರು ದೇಶದ ಸಂಪತ್ತು. ಸೇವಾ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು. ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ವಿ. ಕೆರೂಡಿ, ಸತೀಶ ಕಬ್ಬಿಣದ, ಪ್ರಾಂಶುಪಾಲ ಎಸ್.ಎ. ತಿಪ್ಪೇಶ, ರಾಜಕುಮಾರ ಸಾವಳಗಿ, ಸದಸ್ಯರಾದ ಪ್ರಭಣ್ಣ ಬಳಗಾನೂರ, ಎಂ.ಜಿ. ಬಂಡಿವಡ್ಡರ, ಪಿ. ವೆಂಕಟೇಶ, ಬಸವ್ವ ಹಮ್ಮಿಣಿ, ಹುಸೇನ್ ಸಾಬ್ ಕಳಗೊಂಡ, ಕೋಟ್ರೇಶ ಬಿ., ದೀಪಕ ಶಿಂಧೆ, ಲೋಕೇಶ ಬಿ. ಇದ್ದರು.