
ಉಡುಪಿ : ಅಷ್ಟಮಠದ ಯತಿಗಳು ಓಡಾಡುವ, ಭಕ್ತಿ ಶ್ರದ್ಧೆಯ ನೆಲೆಯಲ್ಲಿ ರಥೋತ್ಸವ ನಡೆಯುವ ಉಡುಪಿ ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್, ಮದುವೆ ಬಳಿಕದ ಫೋಟೋ, ವಿಡಿಯೋ ಶೂಟ್ ನಿಷೇಧಿಸಿ ಶ್ರೀಕೃಷ್ಣ ಮಠದ ಆಡಳಿತವು ಕಠಿಣ ನಿರ್ಧಾರ ತಳೆದಿದೆ. ಶ್ರೀಕೃಷ್ಣ ಮಠ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಪುರಾತನ ದೇವಸ್ಥಾನ, ಕನಕಗೋಪುರ, ಅಷ್ಟಮಠಗಳ ಎದುರು, ರಥಬೀದಿಯಲ್ಲಿ ಮದುವೆಯಾಗಲಿರುವ ಜೋಡಿ ಶೂಟ್ ನಿರತವಾಗುತ್ತಿತ್ತು, ಸರಸ ಸಲ್ಲಾಪದಲ್ಲಿ ತೊಡಗುತ್ತಿತ್ತು. ಯತಿಗಳು ಓಡಾಡುವ ವೇಳೆ ಜೋಡಿ ಫೋಟೋ ಶೂಟ್ ಅಂಗವಾಗಿ ಅಸಭ್ಯ ವರ್ತನೆಯಲ್ಲಿ ಮೈಮರೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಪ್ರಿವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಶೂಟ್ ನಿಷೇಧಿಸುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

j3tvkannada
ಶ್ರೀಕೃಷ್ಣ ಮಠಕ್ಕೆ ಹೊರಜಿಲ್ಲೆ, ಹೊರ ರಾಜ್ಯ ಮಾತ್ರವಲ್ಲ ವಿದೇಶದಿಂದಲೂ ಸಾವಿರಾರು ಪ್ರವಾಸಿಗರು ನಿತ್ಯವೂ ಆಗಮಿಸುತ್ತಾರೆ. ದೇವರಿಗೆ ಕೈ ಮುಗಿದು ದೇವಳದ ಎದುರು ಜೋಡಿ, ಕುಟುಂಬ ಸಮೂಹದ ಚಿತ್ರ ತೆಗೆಯುವುದು ಸಾಮಾನ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಿ ವೆಡ್ಡಿಂಗ್ ಶೂಟ್ ರಥಬೀದಿಯಿಂದ ದೇವಳದ ಆವರಣಕ್ಕೂ ಕಾಲಿಟ್ಟಿದ್ದು, ಮುಜುಗರದ ಸನ್ನಿವೇಶ ಸೃಷ್ಟಿಸಿತ್ತು. ಶ್ರೀಕೃಷ್ಣಮಠದ ಆಡಳಿತ ಗುರುವಾರದಿಂದಲೇ ಅನ್ವಯವಾಗುವಂತೆ ಪ್ರಿ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್ ನಿಷೇಧಿಸಿದೆ. ರಥಬೀದಿ ಗರ್ಭಿಣಿಯರಿಗೆ ದೇವರ ಚಿಂತನೆಯ ಆಹ್ಲಾದಕರ ತಾಣವೆನ್ನುವ ನೆಲೆಯಲ್ಲಿ ಪ್ರೆಗ್ನೆನ್ಸಿ ಶೂಟ್, ಉಪನಯನವಾದ ವಟುವಿನ ಶೂಟ್ಗಳೂ ರಥಬೀದಿಯಲ್ಲಿ ಬೆಳಗ್ಗಿನ ಅವಧಿಯಲ್ಲಿ ಅಪರೂಪಕ್ಕೆ ನಡೆಯುತ್ತಿದ್ದರೆ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಶೂಟ್ ಇತ್ತೀಚೆಗೆ ಹೆಚ್ಚಿತ್ತು.

j3tvkannada
ಏಳು ಶತಮಾನಗಳ ಹಿಂದೆ ತಾಳೆಗರಿಯಲ್ಲಿ ಉಡುಪಿಯ ಯತಿಯೊಬ್ಬರು ತುಳು ಲಿಪಿಯಲ್ಲಿ ರಚಿಸಿದ ಸರ್ವಮೂಲ ಗ್ರಂಥಕ್ಕೆ ಪಡುಬಿದ್ರಿ ಸಮೀಪದ ಪಲಿಮಾರು ಮೂಲಮಠದಲ್ಲಿ ನಿತ್ಯ ಪೂಜೆ ನೆರವೇರುತ್ತಿದೆ. ಇದರ ಪ್ರತಿಯನ್ನೇ ಸಂಸದ ತೇಜಸ್ವಿ ಸೂರ್ಯ ದಂಪತಿ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಪಲಿಮಾರು ಮಠದ ಮೂಲ ಯತಿ ಶ್ರೀ ಹೃಷಿಕೇಶತೀರ್ಥರು ರಚಿತ ಸರ್ವಮೂಲ ಗ್ರಂಥದ ಸ್ಕ್ಯಾನ್ ಮಾಡಿದ ಸ್ವರ್ಣ ಲೇಪಿತ ಚಿಪ್ ಡಿಸ್ಕ್ ರೂಪದಲ್ಲಿದ್ದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಪತ್ನಿ ಶಿವಶ್ರೀ ಸ್ಕಂದ ಜತೆಗೂಡಿ ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ಇತ್ತೀಚೆಗೆ ನೀಡಿದ ಹಿನ್ನೆಲೆಯಲ್ಲಿ ಸರ್ವಮೂಲ ಗ್ರಂಥ ಸಹಿತ ತುಳುಲಿಪಿ, ಉಡುಪಿಯ ಅಷ್ಟಮಠಗಳಲ್ಲಿರುವ ಅಮೂಲ್ಯ ತಾಳೆಗರಿಗಳು, ಕಾಗದ ಹಸ್ತಪ್ರತಿಗಳು ಮುನ್ನೆಲೆಗೆ ಬಂದಿವೆ.