
ಬೆಳಗಾವಿ: ಸಾಕುನಾಯಿ ಕಚ್ಚಿದ್ದರಿಂದ ನಂಜು ಏರಿ ವ್ಯಕ್ತಿಯೊಬ್ಬರು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದ ಶಿವಶಂಕರ ಪರಿಸರಗೋಳ (35) ಮೃತರು. 6 ತಿಂಗಳ ಹಿಂದೆ ಅವರು ನಾಯಿ ತಂದು, ಸಾಕಿದ್ದರು. ಆದರೆ, ಅದಕ್ಕೆ ನಂಜುನಿರೋಧ ಚುಚ್ಚುಮದ್ದು ಹಾಕಿಸಿರಲಿಲ್ಲ. ತಿಂಗಳ ಹಿಂದೆ ಆಟ ಆಡುವಾಗ, ನಾಯಿ ಆಕಸ್ಮಿಕವಾಗಿ ಕಚ್ಚಿತ್ತು. ಸಾಕುನಾಯಿ ಆಗಿದ್ದರಿಂದ ಶಿವಶಂಕರ ಅವರು ಚುಚ್ಚುಮದ್ದು ತೆಗೆದುಕೊಂಡಿರಲಿಲ್ಲ. ತಿಂಗಳ ಬಳಿಕ ಅವರಿಗೆ ನಂಜೇರಿತು. ನಾಲ್ಕು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು’ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.