
ತುಮಕೂರು: ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ ಮತ್ತು ಎನ್.ಎಸ್.ಎಸ್ ಶಿಬಿರವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು.

j3tvkannada
ಸಾಕಷ್ಟು ಯುವಸಂಪತ್ತನ್ನು ಹೊಂದಿರುವ ಭಾರತದಲ್ಲಿ ಯುವಜನತೆ ಉತ್ತಮ ಆರೋಗ್ಯ, ಸಂಸ್ಕೃತಿ, ಮೌಲ್ಯಗಳನ್ನು ಮೈಗೂಡಿಸಿಕೊಂಡು ಶ್ರಮಿಸಿದರೆ ಭವ್ಯ ಭಾರತ ನಿರ್ಮಾಣವಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಜಾನಪದ ಉತ್ಸವ ಮತ್ತು ಎನ್ಎಸ್ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಯುವಜನತೆಯಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಮೂಡಿಸಲು ಸಾಧ್ಯ. ಮುಂದಿನ ದಿನಗಳಲ್ಲಿ ಕಾಲೇಜಿಗೆ ಕಾಂಪೌಂಡ್ ಮತ್ತು ಹೆಚ್ಚುವರಿ ಕೊಠಡಿ ಮತ್ತು ಬಾಲಕ, ಬಾಲಕಿಯರಿಗೆ ವಸತಿನಿಲಯ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ಗೃಹಸಚಿವರ ವಿಶೇಷ ಕರ್ತವ್ಯಾಧಿಕಾರಿ ಕೆ.ನಾಗಣ್ಣ, ಪ್ರಾಂಶುಪಾಲ ಎಸ್.ಆರ್.ಹನುಮಂತರಾಯ, ಸಹಾಯಕ ಪ್ರಾಧ್ಯಾಪಕ ವಿಜಯ್ ಎನ್. ಧರಣೇಂದ್ರಕುಮಾರಿ ಮಾತನಾಡಿದರು.