
ಗದಗ : ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಡಿಬಿಒಟಿ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 15 ತಿಂಗಳ ಬಿಲ್ ಪಾವತಿಸಿಲ್ಲ. ಸಿಬ್ಬಂದಿಗಳಿಗೆ ಕಂಪನಿ ಕಳೆದ 4 ತಿಂಗಳಿಂದ ಸಮರ್ಪಕ ವೇತನ ನೀಡದಿರುವುದರಿಂದ ಜೀವನ ನಡೆಸುವುದು ಕಷ್ಟ. ಕೂಡಲೇ ಸಿಬ್ಬಂದಿಗಳಿಗೆ ವೇತನ ಪಾವತಿಸಬೇಕು’ ಎಂದು ಡಿಬಿಒಟಿ ಉದ್ಯೋಗಿ ಮಂಜುನಾಥ ಸೂಡಿ ಹೇಳಿದರು.

j3tvkannada
ಇಲ್ಲಿನ ಗದಗ ಜಿಲ್ಲಾಡಳಿತದ ಎದುರು ಡಿಬಿಓಟಿ ಸಿಬ್ಬಂದಿಗಳಿಗೆ ವೇತನ ಹಾಗೂ ನಿರ್ವಹಣೆ ಸಂಪನ್ಮೂಲ ಒದಗಿಸುವಂತೆ ಸಾಂಕೇತಿಕವಾಗಿ ಧರಣಿ ನಡೆಸಿ ಮಾತನಾಡಿದ ಅವರು, ‘ಉದ್ಯೋಗಿಗಳ ವೇತನ ಮತ್ತು ಕನಿಷ್ಠ ನಿರ್ವಹಣೆಗೆ ಬೇಕಾಗುವ ಅತ್ಯಾವಶ್ಯಕ ಸಾಮಗ್ರಿಗಳಿಗೆ ಕೊರತೆ ಆಗದಂತೆ ಇಲಾಖೆ ಅನುದಾನ ಬಿಡುಗಡೆ ಮಾಡಬೇಕೆಂದು ತಿಳಿಸಿದರು.