
ದಾವಣಗೆರೆ: ಕಳವು ಆರೋಪ ಎದುರಿಸುತ್ತಿದ್ದ ಬಾಲಕನನ್ನು ಅರೆಬೆತ್ತಲೆಗೊಳಿಸಿ, ಅಡಿಕೆ ಮರಕ್ಕೆ ಕಟ್ಟಿಹಾಕಿ, ಕೆಂಪಿರುವೆ ಬಿಟ್ಟು ಚಿತ್ರಹಿಂಸೆ ನೀಡಿದ್ದ 9 ಜನರನ್ನು ಚನ್ನಗಿರಿ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿಯ ಸುಭಾಷ್ (21), ಲಕ್ಕಿ (21), ಪರಶು (25), ದರ್ಶನ್ (22), ಶಿವದರ್ಶನ್ (20), ಹರೀಶ(25), ರಾಜು(25), ಭೋಣಿ(18) ಹಾಗೂ ಸುಧನ್(32) ಬಂಧಿತರು.
ಮನೆಗೆ ನುಗ್ಗಿ ಕಳವು ಮಾಡಲು ಯತ್ನಿಸಿದ ಆರೋಪದ ಮೇರೆಗೆ 17 ವರ್ಷದ ಬಾಲಕನನ್ನು ಹಿಡಿದಿದ್ದ ಗ್ರಾಮಸ್ಥರು ಅಡಿಕೆ ಮರಕ್ಕೆ ಕಟ್ಟಿ ಏ.2ರಂದು ಹಲ್ಲೆ ನಡೆಸಿದ್ದರು. ಬಾಲಕನಿಗೆ ಥಳಿಸುವ ಹಾಗೂ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬಾಲಕನ ತಾತ ದೂರು ನೀಡಿದ್ದು ಅಮಾನವೀಯವಾಗಿ ವರ್ತಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.