
ಸಿರುಗುಪ್ಪ: ವಿದ್ಯಾರ್ಥಿ ದೆಸೆಯಲ್ಲಿ ಯಾವುದೇ ವಿಷಯದಲ್ಲಾದರೂ ಆಸಕ್ತಿ ಬೆಳೆಸಿಕೊಳ್ಳಬೇಕು ಅಧ್ಯಯನ ಸಂಶೋಧನೆ ಪ್ರಯೋಗ ಶೀಲತೆ ಮನೋಭಾವ ಕ್ರಿಯಾಶೀಲತೆ ಚತುರತೆ ಸಂಶೋಧನೆ ಹೊಂದಿದವರಾದರೆ ಅಂತಹ ವ್ಯಕ್ತಿ ಶಕ್ತಿಯಾಗಿ ಸಾಧಕರಾಗಿ ವಿಶ್ವದಲ್ಲಿ ಮೇಲೆತ್ತರದಲ್ಲಿ ಬೆಳೆಯುತ್ತಾರೆ, ಇಂದಿನ ಯುವ ಸಮುದಾಯದಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ, ಬೆಳೆಸುವ ಅಗತ್ಯತೆ ಇದ್ದು, ವಿಜ್ಞಾನಕ್ಕೆ ಸಂಬಂಧಿಸಿದ ಇಂಥ ಕಾರ್ಯಕ್ರಮಗಳು ಅದಕ್ಕೆ ಪೂರಕವಾಗಿರುತ್ತದೆ ಎಂದು ಮುಖ್ಯಗುರು ಸಿದ್ಧಲಿಂಗ ಜೆ. ಮಸೂತಿ ಹೇಳಿದರು.
ನಗರದ ರಾಜೀವ್ ಗಾಂಧಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಸಿ ವಿ. ರಾಮನ್ ರವರ ಭಾವಚಿತ್ರಕ್ಕ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿ.ವಿ ರಾಮನ್ ಅವರಿಗೆ ವಿಜ್ಞಾನ ವಿಷಯದಲ್ಲಿದ್ದ ಆಸಕ್ತಿ ಬೆಳಕಿನ ಚದರುವಿಕೆಯ ನಿಯಮ ಪ್ರತಿಪಾದನೆಯೊಂದಿಗೆ ನೋಬೆಲ್ ಪ್ರಶಸ್ತಿ ಪಡೆದು ನಮ್ಮ ದೇಶದ ಹಿರಿಮೆಯನ್ನು ಹೆಚ್ಚಿಸಲು ಸಾದ್ಯವಾಯಿತು.
ಅವರ ಈ ನಿಯಮ ಪ್ರತಿಪಾದಿಸಿದ ನೆನಪಿಗಾಗಿ ಪ್ರತೀ ವರ್ಷ ಫೆಬ್ರವರಿ 28ನೇ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಅವರ ಸಾಧನೆ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದು ಬಣ್ಣಿಸಿದರು. ನಾವೆಲ್ಲರೂ ದೈನಂದಿನ ಜೀವನದಲ್ಲಿ ವಿಜ್ಞಾನವನ್ನು ನಮ್ಮ ಪ್ರಗತಿಗೆ ಪೂರಕವಾಗಿ ಬಳಕೆ ಮಾಡಿದಲ್ಲಿ ಅದು ನಮ್ಮ ಒಳಿತಿಗೆ ಕಾರಣವಾಗುತ್ತದೆ, ದುರುಪಯೋಗ ಪಡಿಸಿಕೊಂಡಲ್ಲಿ ನಮ್ಮ ಅವನತಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ವಿಜ್ಞಾನ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿಲಾಯಿತು. ಮಕ್ಕಳಿಗಾಗಿ ವಿಜ್ಞಾನ ವಿಷಯದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶಿಕ್ಷಕರಾದ ಪ್ರಿಯಾಂಕ ಜೆ. ಮಸೂತಿ, ಕೆ.ಎಂ. ಮಲ್ಲಿಕಾರ್ಜುನಯ್ಯ ಸ್ವಾಮಿ, ಬಿ.ಮಂಜುನಾಥ ರೆಡ್ಡಿ ಇನ್ನಿತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.