
ಆನೇಕಲ್: ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಯುಗಾದಿ ಪಾರ್ಟಿಯಲ್ಲಿ ಕುಖ್ಯಾತ ರೌಡಿಶೀಟರ್ ಮಂಜು ಅಲಿಯಾಸ್ ನೇಪಾಳಿ ಮಂಜನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

J3tvkannada
ಯುಗಾದಿ ಹಬ್ಬದ ಪ್ರಯುಕ್ತ ನೇಪಾಳಿ ಮಂಜ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ. ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮಚ್ಚು, ಲಾಂಗ್ನಿಂದ ಮಂಜನ ಮೇಲೆ ದಾಳಿ ನಡೆಸಿದ್ದಾರೆ ಮಂಜನ ತಲೆ, ಹೊಟ್ಟೆ, ಎದೆ ಭಾಗಕ್ಕೆ ಮಚ್ಚು, ಲಾಂಗ್ಗಳಿಂದ ಚುಚ್ಚಿದ್ದಾರೆ ಮಂಜ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದುಷ್ಕರ್ಮಿಗಳು ಬರುತ್ತಿದ್ದಂತೆಯೇ ಮಂಜನ ಸ್ನೇಹಿತರು ಓಡಿ ಹೋಗಿದ್ದಾರೆ ಎನ್ನಲಾಗಿದೆ. ರೌಡಿಶೀಟರ್ ನೇಪಾಳಿ ಮಂಜ ಕಳೆದ ಕೆಲ ದಿನಗಳಿಂದ ರೌಡಿಸಂ ಬಿಟ್ಟು ಕುಣಿಗಲ್ನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಯುಗಾದಿ ಪ್ರಯುಕ್ತ ಊರಿಗೆ ಬಂದಾಗ ಹಳೆಯ ವೈಷಮ್ಯದಿಂದ ಕಾಯುತ್ತಿದ್ದ ವಿರೋಧಿಗಳು ಆತನನ್ನು ಮುಗಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.