
ಚಿಕ್ಕಮಗಳೂರು: ಹೆಬ್ಬೊಳೆ ಬಳಿ ಭದ್ರಾ ನದಿಗೆ ನಿರ್ಮಾಣ ಆಗುತ್ತಿರುವ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಒಂದು ತಿಂಗಳಿಂದ ಸೇತುವೆ ಕಾಮಗಾರಿಗಾಗಿ ಕಳಸ-ಹೊರನಾಡು ರಸ್ತೆ ಬಂದ್ ಮಾಡಲಾಗಿದೆ. ಒಂದು ತಿಂಗಳ ಪ್ರಗತಿ ನೋಡಿದರೆ ಸೇತುವೆ ಕೆಲಸ ಮೇ ತಿಂಗಳವರೆಗೂ ಪೂರ್ಣಗೊಳ್ಳುವುದು ಅನುಮಾನ ಎಂದು ಈ ರಸ್ತೆಯ ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ. ನಾವು ಕಳಸದಿಂದ 4 ಕಿ.ಮೀ ದೂರದ ಮನೆಗೆ 15 ಕಿ.ಮೀ ಸುತ್ತಿಕೊಂಡು ಬರುತ್ತಿದ್ದೇವೆ. ಕಳಸಕ್ಕೆ ಹೋಗುವ ಶಾಲಾ ಮಕ್ಕಳು ಮತ್ತು ನೂರಾರು ಜನರಿಗೆ ಇದರಿಂದ ತೊಂದರೆ ಆಗಿದೆ. ಆದರೆ, ಸೇತುವೆ ಸಂಪರ್ಕ ರಸ್ತೆಗೆ ಮಣ್ಣು ತುಂಬುವ ಕೆಲಸ ನಿಧಾನವಾಗಿ ಮಾಡುತ್ತಿದ್ದಾರೆ. ಹೀಗೇ ಕೆಲಸ ಮಾಡಿದರೆ ಇನ್ನೂ 3 ತಿಂಗಳು ಕಳೆದರೂ ಮುಗಿಯುವುದು ಅನುಮಾನ’ ಎಂದು ದಾರಿಮನೆ ನಿವಾಸಿ ಸುದರ್ಶನ್ ಕಳಕೋಡು ಅಸಮಾಧಾನ ವ್ಯಕ್ತಪಡಿಸಿದರು. ಸೇತುವೆ ಕಾಮಗಾರಿ ಚುರುಕಾಗಿ ನಡೆಸುವಂತೆ ಶಾಸಕಿ ನಯನಾ ಮೋಟಮ್ಮ ಲೋಕೋಪಯೋಗಿ ಎಂಜಿನಿಯರ್ಗೆ ಸೂಚನೆ ನೀಡಿದ್ದಾರೆ’ ಎಂದು ಶಾಸಕರ ಆಪ್ತ ಕಾರ್ಯದರ್ಶಿ ಸಂಶುದ್ದೀನ್ ತಿಳಿಸಿದರು.