
ದಾವಣಗೆರೆ: ತ್ಯಾವಣಿಯ ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಮಗ್ರ ಕೃಷಿ ಪದ್ಧತಿ ಜೊತೆಗೆ ಹೈನುಗಾರಿಕೆ, ಎರೆಹುಳು ತಯಾರಿಕೆ, ಹಸಿರೆಲೆ ಗೊಬ್ಬರ ಬಳಕೆ ಮಾಡಿ ಮಣ್ಣಿನ ಆರೋಗ್ಯ ಮತ್ತು ಮಾನವನ ಆರೋಗ್ಯ ವೃದ್ಧಿಸಿಕೊಳ್ಳಬೇಕು’ ಎಂದು ಕತ್ತಲಗೆರೆ ವಿಸ್ತರಣಾ ಘಟಕದ ಮುಖಸ್ಥ ಗಂಗಪ್ಪಗೌಡ ಬಿರಾದಾರ ತಿಳಿಸಿದರು.

ಸಮೀಪದ ಕತ್ತಲಗೆರೆ ಕೃಷಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ರೈತರನ್ನು ಕೃಷಿಯಲ್ಲಿ ಉತ್ತೇಜಿಸುವ ಸಲುವಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ರೈತನ ಮಿತ್ರ ಎರೆಹುಳು ಉತ್ತಮ ಪೋಷಕಾಂಶಯುಕ್ತ ಸಾವಯವ ಗೊಬ್ಬರವನ್ನು ನೀಡುವ ನಿಸರ್ಗದ ವರ. ಇದನ್ನು ಬಳಸಿಕೊಂಡು ಉತ್ತಮ ಎರೆಹುಳು ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸುವುದರಿಂದ ಉತ್ತಮ ಪೋಷಕಾಂಶ ದೊರೆಯುತ್ತದೆ, ಎಂದು ತಿಳಿಸಿದರು.