ಕಲಬರಗಿ(ಜೇವರ್ಗಿ): ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದಿದ್ದ ರೈತನೋರ್ವ ಸಾಲದ ಶೂಲಕ್ಕೆ ಬಲಿಯಾಗಿದ್ದು ತನ್ನದೇ ಮನೆಯಲ್ಲಿ ಮಧ್ಯಾಹ್ನ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಜೇವರ್ಗಿ ತಾಲ್ಲೂಕಿನ ಕೋಳಕೂರ್ ಗ್ರಾಮದಲ್ಲಿ ನಡೆದಿದೆ.

j3tvkannada.in
ತಾಲ್ಲೂಕಿನ ಕೋಳಕೂರ್ ಗ್ರಾಮದ ನಿವಾಸಿಯಾಗಿದ್ದ ಬಸವರಾಜ್ ಅರಳಗುಂಡಗಿ ವಯಸ್ಸು (40) ಎನ್ನುವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈತ ಬಸವರಾಜ್ ಅವರು ಕೃಷಿಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿಂದ 02 ಲಕ್ಷ, ಸಹಕಾರ ಬ್ಯಾಂಕ್ ನಿಂದ 50 ಸಾವಿರ ಹಣ ಹಾಗೂ ಖಾಸಗಿಯಾಗಿ ಕೈಗಡವಾಗಿ 06 ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದನು.
ಸರಿಯಾಗಿ ಬೆಳೆ ಕೈಗೆ ಬಾರದೆ ಮಾಡಿದ ಸಾಲ ತೀರಿಸುವುದಾದರೂ ಹೇಗೆ ಎಂದು ಮನನೊಂದಿದ್ದ ರೈತ ಬಸವರಾಜ್ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ಮಧ್ಯಾಹ್ನ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.