
ಬೀದರ್: ಮೊಬೈಲ್ ಹೆಚ್ಚು ಬಳಸಬಾರದು ಎಂದು ತಂದೆ ಹೇಳಿದ್ದಕ್ಕೆ ಮನನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ನಡೆದಿದೆ.

ಸೋನಿ ಸಂತೋಷ ಬನವಾಸೆ (15) ಮೃತ ಬಾಲಕಿ. ಮೊಬೈಲ್ನಲ್ಲಿ ಹೆಚ್ಚಿನ ಸಮಯ ಕಾಲಾಹರಣ ಮಾಡಬಾರದು’ ಎಂದು ಸಂತೋಷ ಅವರು ಮಗಳಿಗೆ ಬುದ್ದಿಮಾತು ಹೇಳಿದ್ದಾರೆ. ಇದರಿಂದ ಮನನೊಂದ ಸೋನಿ ನೇಣು ಹಾಕಿಕೊಂಡು ಜೀವ ತ್ಯಜಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.