
ಚಾಮರಾಜನಗರ: ಕೊಳ್ಳೇಗಾಲದ ಮೋಳೆ ಬಡಾವಣೆಯ ಹೊರವಲಯದ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿಗೆ ಬಿದ್ದಿದೆ. ರೈತ ನಂಜುಂಡಸ್ವಾಮಿ ಎಂಬುವರಿಗೆ ಸೇರಿದ ಜಮೀನಿಗೆ ಲಾರಿ ಉರುಳಿ ಬಿದ್ದಿದೆ.

ಲಾರಿ ಚಾಮರಾಜನಗರದಿಂದ ಮಧ್ಯರಾತ್ರಿ ಕೂಲ್ ಡ್ರಿಂಕ್ಸ್ ತುಂಬಿಕೊಂಡು ಹೈದರಾಬಾದ್ಗೆ ಹೋಗುತ್ತಿತ್ತು. ಲಾರಿ ಬಿದ್ದಿದ್ದರಿಂದ ನಗರದ ಮೋಳೆ ಬಡಾವಣೆಯ ರೈತ ನಂಜುಂಡಸ್ವಾಮಿ ಅವರು ನಾಟಿ ಮಾಡಿದ್ದ ಭತ್ತದ ಪೈರು ಸಂಪೂರ್ಣ ಹಾಳಾಗಿದೆ. ಚಾಲಕ ಅಸ್ಪಾಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.