
ರಾಮನಗರ: ತಾಲ್ಲೂಕಿನ ಗೌಡಳ್ಳಿಯಲ್ಲಿ ಶನಿವಾರ ರಾತ್ರಿ ಕಾಡಾನೆ ದಾಳಿಗೆ ತೆಂಗಿನ ಮರ ಹಾಗೂ ತೋಟಕ್ಕೆ ನೀರು ಹಾಯಿಸುವ ಪೈಪ್ಗಳು ನಾಶವಾಗಿವೆ.

ಗೌಡಳ್ಳಿಯ ರೈತ ಮಹಿಳೆ ಪ್ರಮೀಳಾ ಎಂಬುವವರಿಗೆ ಸೇರಿದ್ದ ಜಮೀನಿನಲ್ಲಿ ಕಾಡಾನೆಗಳು ದಾಳಿ ನಡೆಸಿ ತೆಂಗು ಮತ್ತು ಪೈಪ್ಗಳನ್ನು ನಾಶಗೊಳಿಸಿವೆ. ಒಂದು ಎಕರೆಯಲ್ಲಿ ರೇಷ್ಮೆ ತೋಟ ಹಾಗೂ ತೆಂಗಿನ ಮರಗಳನ್ನು ಬೆಳೆಸಿದ್ದರು. 30 ತೆಂಗಿನ ಮರಗಳು ಹಾಗೂ ರೇಷ್ಮೆ ತೋಟಕ್ಕೆ ನೀರು ಹಾಯಿಸಲು ಅಳವಡಿಸಿದ್ದ ಪೈಪ್ಗಳನ್ನು ನಾಶ ಮಾಡಿವೆ. ಇದರಿಂದ ರೈತರಿಗೆ ಸುಮಾರು ₹50 ಸಾವಿರ ನಷ್ಟ ಉಂಟಾಗಿದೆ. ಹಾಗಾಗಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ಮಹಿಳೆ ಪ್ರಮೀಳಾ ಅವರು ಒತ್ತಾಯಿಸಿದ್ದಾರೆ.