
ತಿಪಟೂರು: ನಗರದ ಎಪಿಎಂಸಿ ಆವರಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸುತ್ತಿದ್ದು,ಪ್ರತೀ ಕ್ವಿಂಟಲ್ ರಾಗಿ ಚೀಲಕ್ಕೆ ರೂ.40 ಸಂಗ್ರಹಿಸಲಾಗುತ್ತಿದೆ, ಎಂದು ರೈತರು ಆರೋಪಿಸಿದ್ದಾರೆ.

ತಾಲ್ಲೂಕಿನಲ್ಲಿ ಈಗಾಗಲೇ 9,472 ರೈತರು ನೋಂದಾಯಿಸಿದ್ದಾರೆ. ಒಬ್ಬ ರೈತ ಒಂದು ಎಕರೆಗೆ 10 ಕ್ವಿಂಟಲ್ನಂತೆ ಗರಿಷ್ಠ 20 ಕ್ವಿಂಟಲ್ ರಾಗಿ ಮಾರಾಟ ಮಾಡಲು ಅವಕಾಶವಿದೆ. ಕ್ವಿಂಟಲ್ಗೆ 4,290 ನಿಗದಿ ಮಾಡಲಾಗಿದೆ. ರಾಗಿ ತಂದ ರೈತರು ಎರಡರಿಂದ ಮೂರು ದಿನ ಕಳೆಯಬೇಕಿದೆ. ಖರೀದಿ ವಿಲೇವಾರಿ ನಂತರ ಬೆರಳಚ್ಚು ನೀಡಬೇಕಿದ್ದು, ಸರ್ವರ್ ಸಮಸ್ಯೆಯಿಂದ ಮತ್ತೆರಡು ದಿನಗಳು ಕಾಯಬೇಕಿದೆ ಹಾಗೂ ಖರೀದಿ ಕೇಂದ್ರದ ಪಕ್ಕದಲ್ಲಿ ಎಪಿಎಂಸಿ ಉಗ್ರಾಣದ ಸೌಲಭ್ಯವಿದ್ದರೂ ಹಮಾಲಿಗಳ ಸಮಸ್ಯೆಯಿಂದ ರಾಗಿ ಚೀಲಗಳ ವಿಲೇವಾರಿಗೆ ತೊಂದರೆಯಾಗುತ್ತಿದೆ, ಎಂದು ರೈತರು ಆಕ್ಷೇಪ ವ್ಯಕ್ತಪಡಿಸುತ್ತಿದಾರೆ.