
ಹುಬ್ಬಳ್ಳಿ: ತಿರುಪತಿ ರೈಲು (ಗಾಡಿ ಸಂಖ್ಯೆ : 57401/57402) ಪುನಾರಂಭಗೊಂಡಿದೆ. ಮೂರು ತಿಂಗಳವರೆಗೆ ಮಹಾ ಕುಂಭಮೇಳದ ನಿಮಿತ್ತ ಈ ರೈಲನ್ನು ಪ್ರಯಾಗ್ರಾಜ್ಗೆ ಓಡಿಸಲಾಗುತ್ತಿತ್ತು. ಇದೀಗ ಹಿಂದಿನ ವೇಳಾಪಟ್ಟಿಯಂತೆ ಸಂಚಾರ ನಡೆಸಲಿದೆ. ಈ ರೈಲು ಹುಬ್ಬಳ್ಳಿಯಿಂದ ಬೆಳಗ್ಗೆ 6ಕ್ಕೆ ನಿರ್ಗಮಿಸಿ ಗದಗ ಮಾರ್ಗವಾಗಿ ಹೊಸಪೇಟೆಗೆ 9ಕ್ಕೆ ಆಗಮಿಸಲಿದೆ. ನಂತರ ಬಳ್ಳಾರಿ, ಕಡಪ ಮಾರ್ಗವಾಗಿ ರಾತ್ರಿ 10ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಬೆಳಗ್ಗೆ 6ಕ್ಕೆ ನಿರ್ಗಮಿಸಿ ಹೊಸಪೇಟೆಗೆ ಸಂಜೆ 5.20ಕ್ಕೆ ಆಗಮಿಸಿ ರಾತ್ರಿ 9.30ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಮಹಾ ಕುಂಭಮೇಳದ ನಿಮಿತ್ತ ರದ್ದಾಗಿರುವ ಬೆಳಗಾವಿ – ಹೊಸಪೇಟೆ – ಹೈದರಾಬಾದ್ – ಮಣಗೂರು (ಗಾಡಿ ಸಂಖ್ಯೆ 07335/07336) ರೈಲು ಸಂಚಾರವನ್ನೂ ಪುನರಾಂಭಿಸಿಬೇಕೆಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್ ಮತ್ತು ಕಾರ್ಯದರ್ಶಿ ಮಹೇಶ್ ಕುಡುತಿನಿ ಅವರು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಒತ್ತಾಯಿಸಿದ್ದಾರೆ.
