
ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾಸ್ವಿಹಳ್ಳಿಯ ಬಳಿ, ಮುಖ್ಯ ಕಾಲುವೆಗೆ ಸಂಪರ್ಕ ಕಲ್ಪಿಸುವ 20 ಮೀಟರ್ ಉದ್ದದ ಕಾಲುವೆ ಒಡೆದು ಹೋದ ಹಿನ್ನೆಲೆ ಅಪಾರವಾದ ನೀರು ಹಳ್ಳ ಸೇರಿದೆ. ಶಿವಮೊಗ್ಗದ ಭದ್ರಾ ಡ್ಯಾಂನಿಂದ ಈ ಕಾಲುವೆಯ ಮುಖಾಂತರ ರೈತರಿಗೆ ಬೇಸಿಗೆ ಬೆಳೆಗೆ ಅನುಕೂಲವಾಗಲೆಂದು ನೀರು ಹರಿಸಲಾಗುತ್ತಿತ್ತು.

J3tvkannda.in
ಇದೀಗ ಕಾಲುವೆ ಒಡೆದು ನೀರು ಹಳ್ಳ ಸೇರುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಬೇಸಿಗೆಯಲ್ಲಿ ನೀರಿನ ಅಭಾವ, ಇರುವುದರಿಂದ ತಕ್ಷಣಕ್ಕೆ ನೀರು ಪೋಲಾಗದಂದೆ ಸೂಕ್ತ ಕ್ರಮ ಕೈಗೊಂಡು ದುರಸ್ಥಿ ಕಾರ್ಯ ಮಾಡಬೇಕಾಗಿ ಹಾಗೂ ಜಮೀನಿಗೆ ನೀರು ಬಿಡುವಂತೆ ರೈತರು ಆಗ್ರಹಿಸಿದ್ದಾರೆ.