
ಗದಗ: ಹೋಳಿ ಆಚರಣೆಯ ನಂತರ ಕೆರೆಯಲ್ಲಿ ಈಜಲು ತೆರಳಿದ್ದ 16 ವರ್ಷದ ಬಾಲಕ ನೀರು ಪಾಲಾಗಿರುವಂತಹ, ದುರ್ಘಟನೆ ಗದಗ್ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ, ಗ್ರಾಮದಲ್ಲಿ ನಡೆದಿದೆ. ಸ್ಥಳೀಯರ ಸಹಾಯದಿಂದ ಬಾಲಕನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗಿದಿದ್ದು. ದೇವೇಂದ್ರ ಮೃತ ಬಾಲಕ ಎನ್ನಲಾಗಿದೆ. ಮಗನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಈ ಬಗ್ಗೆ, ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

J3Tvkannada.in
ಒಂದು ಕಡೆ ಕರ್ನಾಟಕದಲ್ಲಿ ಹೋಳಿ ಹಬ್ಬದ ಸಂಭ್ರಮ, ಅನೇಕ ಬಗೆಯ ಕಲರ್ ಕಲರ್ ಬಣ್ಣದೋಕಳಿಯಲ್ಲಿ ಜನರು ಮಿಂದೆದ್ದಿದ್ದಾರೆ. ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂತಸ ಪಟ್ಟಿದ್ದಾರೆ. ಆದರೆ ಇದೇ ಕಲರ್ ಫುಲ್ ಹೋಳಿ ಹಬ್ಬದಂದು ಈ ಸಾವಿನಿಂದಾಗಿ ಯಳವತ್ತಿ, ಗ್ರಾಮದಲ್ಲಿ ಸಂಭ್ರಮದ ಬದಲಾಗಿ ಸೂತಕದ ಛಾಯೆ ಆವರಿಸಿದೆ.