
ಬೀದರ: ಐದು ವರ್ಷದ ಮಕ್ಕಳ ಸಾವಿಗೆ ಅತಿಸಾರ ಭೇದಿ ಪ್ರಮುಖ ಕಾರಣವಾಗಿದ್ದು, ಮಕ್ಕಳಲ್ಲಿ ಬೇಧಿ ರೋಗ ಪುನರಾವರ್ತನೆಯಾದಾಗ ಮಕ್ಕಳ ತೂಕ ಕ್ಷಿಣಿಸಿ, ಅಪೌಷ್ಠಿಕತೆ ಉಂಟಾಗುತ್ತದೆ. ಇದರಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಸಾವಿನ ಪ್ರಮಾಣ ಹೆಚ್ಚು ಸಂಭವಿಸುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ದ್ಯಾನೇಶ್ವರ ನಿರುಗುಡೆ ತಿಳಿಸಿದರು.

j3tvkannada.in
ಅವರು ಬುಧವಾರ ಬ್ರಿಮ್ಸ್ ಆಸ್ಪತ್ರೆ ಬೀದರನ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯಾದ್ಯಾಂತ ಜೂನ್ ೧೬ ರಿಂದ ೩೧ ರವರೆಗೆ ಜರುಗುತ್ತಿರುವ “ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ” ಕಾರ್ಯಕ್ರಮದಲ್ಲಿ ಮಕ್ಕಳಿಗೆ ಓ.ಆರ್.ಎಸ್ ಪೊಟ್ಟಣ ಮತ್ತು ಝಿಂಕ್ ಮಾತ್ರೆ ನೀಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು ಇದನ್ನು ನಿವಾರಿಸುವ ಸಲುವಾಗಿ ೫ ವರ್ಷದೊಳಗಿನ ಎಲ್ಲಾ ಮಕ್ಕಳ ತಾಯಿಂದಿರಿಗೆ ಓ.ಆರ್.ಎಸ್. ಪೊಟ್ಟಣವನ್ನು ಮನೆ ಮನೆಗೆ ತೆರಳಿ ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಓ.ಆರ್.ಎಸ್. ಚಕಿತ್ಸೆಯ ವಿಧಾನ, ಓ.ಆರ್.ಎಸ್. ದ್ರಾವಣ ತಯಾರಿಸುವ ಕ್ರಮ ಹಾಗೂ ಬೇಧಿ ಸಂದರ್ಭದಲ್ಲಿ ಓ.ಆರ್.ಎಸ್. ಮತ್ತು ಝಿಂಕ್ ಮೂಲಕ ಉಪಚರಿಸುವ ಕ್ರಮಗಳ ಕುರಿತು ತಾಯಿಂದಿಯರಿಗೆ ತಿಳಿಸಲಾಗುತ್ತಿದೆ. ಅಲ್ಲದೆ ಕೈತೊಳೆಯುವ ಪ್ರಾತ್ಯಕ್ಷಿಕೆ ಮತ್ತು ಕೈ ತೊಳೆಯುವುದರ ಮಹತ್ವವನ್ನು ಕುರಿತು ವಿವರಿಸಲಾಗುತ್ತದೆ ಎಂದು ತಿಳಿಸಿದರು.
ಅಲ್ಲದೆ ಕೈತೊಳೆಯುವ ಪ್ರಾತ್ಯಕ್ಷಿಕೆ ಮತ್ತು ಕೈ ತೊಳೆಯುವುದರ ಮಹತ್ವವನ್ನು ಕುರಿತು ವಿವರಿಸಲಾಗುತ್ತಿರುವುದರಿಂದ ಎಲ್ಲಾ ಮಕ್ಕಳ ತಾಯಿಂದಿರು ಈ ಯೋಜನೆಯ ಮಹತ್ವವನ್ನು ಅರಿತುಕೊಂಡು ಅನುಸರಿಸಬೇಕು. ಮೊದಲ ಆರು ತಿಂಗಳಲ್ಲಿ, ಮಗುವಿಗೆ ಕೇವಲ ತಾಯಿ ಹಾಲನ್ನು ಮಾತ್ರ ನೀಡಿರಿ. ಅಡುಗೆ ಮಾಡುವ, ಬಡಿಸುವ ಮುನ್ನ ಮತ್ತು ಮಗುವಿನ ಮಲ ಶುಚಿ ಮಾಡಿದ ನಂತರ ಕೈಗಳನ್ನು ಸೋಪು ಬಳಸಿ ತೊಳೆದುಕೊಳ್ಳಿರಿ ಎಂದರು.
ಬೀದರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಅಹ್ಮದುದ್ದೀನ್ ಮಾತನಾಡಿ, ಅತಿಸಾರ ಬೇದಿಯಾಗುವಾಗ ಮತ್ತು ನಂತರ ತಾಯಿ ಹಾಲು, ದ್ರಾವಣಗಳು ಹಾಗೂ ಹೆಚ್ಚುವರಿ ಪೌಷ್ಟಿಕ ಆಹಾರ ನೀಡುವುದನ್ನು ಮುಂದುವರೆಸಲು ತಿಳಿಸಿದರು. ಮಕ್ಕಳ ತಜ್ಞರಾದ ಡಾ. ಜಗದೀಶ ಕೋಟೆ ಮಾತನಾಡಿ, ಮಕ್ಕಳಿಗೆ ವಯಸ್ಸಿಗನುಗುಣವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಲಸಿಕೆ ಹಾಕಿಸುವುದರ ಮೂಲಕ ಮಾರಕ ರೋಗಗಳಿಂದ ತಡೆಗಟ್ಟಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಯು ಡಾ. ಶಿವಶಂಕರ.ಬಿ, ಮಕ್ಕಳ ತಜ್ಞರಾದ ಡಾ. ಶಾಂತಲಾ ಕೌಜಲಗಿ, ಬೀದರ ಪ್ರ.ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಬಿರಾದರ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಶಿವಶಂಕರ ಬೇಮಳಗಿ, ಲೋಕೇಶ ಐ.ಎಫ್.ಎಂ, ಗಂಗಾಧರ ಕಾಂಬಳೆ ಸಿ.ಹೆಚ್.ಓ, ಭಾಗ್ಯಲಕ್ಷ್ಮೀ ಡಿ.ಎನ್.ಓ, ಅಶೋಕ, ವಿನಾಯಕ, ದೇವಿದಾಸ, ಚನ್ನಬಸವ, ಸನ್ನಿಪಾಲ್ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿ, ಸಿಬ್ಬಂದಿಗಳು ಹಾಗೂ ಮಕ್ಕಳ ತಾಯಿಂದಿರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ನಿರೂಪಣೆ ಹಾಗೂ ವಂದನಾರ್ಪಣೆ ನಿರ್ವಹಿಸಿದರು.