
ಬೀದರ್:ಓಂಕಾರ ಎನ್ನುವ ಶಬ್ದ ʼಅʼ ʼಉʼ ʼಮʼ ಎಂಬ ಶಬ್ದದಿಂದ ಉದಯಿಸಿದೆ. ಓಂಕಾರ ನಾದ ಜಪ ಮಾಡುವುದರಿಂದ ಹೃದಯ ಪರಿಶುದ್ಧವಾಗುತ್ತದೆ. ವ್ಯಕ್ತಿಯು ನೇರವಾಗಿ ನಿಲ್ಲಲು ಹಾಗೂ ಕುಳಿತುಕೊಳ್ಳಲು ಬೆನ್ನುಮೂಳೆ ಹೇಗೆ ಆಧಾರವೋ, ಜಗತ್ತಿನಲ್ಲಿ ವ್ಯಕ್ತಿ ಬದುಕಲು ಪರಮಾತ್ಮ ಬೆನ್ನುಮೂಳೆಯಂತೆ ಸಹಕಾರಿಯಾಗಿ ನಿಲ್ಲುತ್ತಾನೆ ಎಂದು ಬೀದರ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ತಾಯಿ ನುಡಿದರು. ಪ್ರತಿ ತಿಂಗಳು ಬೀದರ ನಗರದಲ್ಲಿ ಜಿಲ್ಲಾ ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಮನೆ ಮನೆಯಲ್ಲಿ ನಡೆಯುತ್ತಿರುವ ‘ಮಾಸಿಕ ಬಸವಜ್ಯೋತಿ’ ಕಾರ್ಯಕ್ರಮವು ಈ ಬಾರಿ ಗುಂಪಿನಲ್ಲಿರುವ ಶರಣ ಓಂಕಾರ ಮುದ್ದಾ ಅವರ ಮನೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಇದೇ ವೇಳೆ ವೇದಿಕೆ ಮೇಲೆ ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ನಿರ್ಮಲಾ ನಿಲಂ, ರವಿಕಾಂತ ಬಿರಾದಾರ ಹಾಜರಿದ್ದರು. ಕಾರ್ಯಕ್ರಮದಲ್ಲಿ “ಲಿಂಗದೇವ” ಯುಟ್ಯೂಬ್ ಚಾನೆಲ್ನ ವಾರ್ಷಿಕೋತ್ಸವದ ಪ್ರಯುಕ್ತ ಬಸವಕಿರಣ, ಚನ್ನಬಸವ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಶಿವಶರಣಪ್ಪ ಪಾಟೀಲ ಹಾರೂರಗೇರಿ, ಮಲ್ಲಿಕಾರ್ಜುನ ಶಹಾಪುರ, ಕಾಶಿನಾಥ ಪಾಟೀಲ, ಶ್ರೀನಾಥ ಕೋರೆ, ಸಿದ್ದವೀರ ಸಂಗಮದ್, ಗುರುನಾಥ ನಿಡಗುಂದಿ, ಕಲ್ಯಾಣರಾವ ಬಂಬುಳಗಿ, ಬಸವರಾಜ ಲಾಧಾ, ಮಲ್ಲಿಕಾರ್ಜುನ ಜೈಲರ್ ಸೇರಿದಂತೆ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿದಿನ ಸೃಷ್ಟಿಕರ್ತನ ಕುರುಹಾದ ಇಷ್ಟಲಿಂಗವನ್ನು ಪೂಜೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ.
ಹಣ ಇದ್ದವನು ಹಣವಂತ, ಗುಣ ಇದ್ದವನು ಗುಣವಂತ, ಶೀಲ ಇದ್ದವನು ಶೀಲವಂತ ಹಾಗೆಯೇ ಇಷ್ಟಲಿಂಗ ಕಟ್ಟಿಕೊಂಡು ನಿತ್ಯ ಪೂಜಿಸುವವನೇ ನಿಜ ಲಿಂಗಾಯತ ಎಂದು ತಿಳಿಸಿದರು. ಜಗದೇವಿ ಚೆಟ್ಟಿ ಅಕ್ಕನವರು ಹೃದಯ ತುಂಬಿ ಸ್ವಾಗತ ಕೋರಿದ್ದಾರೆ, ಷಟಸ್ಥಲ ಧ್ವಜಾರೋಹಣವನ್ನು ಶಿವಕುಮಾರ ಮುದ್ದಾ ನೆರವೇರಿಸಿ ಕೊಟ್ಟರು. ನಿರೂಪಣೆಯನ್ನು ಅಕ್ಕಮಹಾದೇವಿ ಸ್ವಾಮಿ ಮಾಡಿದರೆ, ಶರಣು ಸಮರ್ಪಣೆಯನ್ನು ಓಂಕಾರ ಮುದ್ದಾ ಮಾಡಿದರು. ಮಹಾಪ್ರಸಾದವನ್ನು ಏರ್ಪಡಿಸಿ ಆಗಮಿಸಿದ ಶರಣ ಬಂಧುಗಳಿಗೆ ಉಣಬಡಿಸಿದರು.