
ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಯಿಂದ ಹೊರ ಸೂಸುವ ಬೂದಿಯಿಂದ ದ್ರಾಕ್ಷಿ ಬೆಳೆಯು ಸಂಪೂರ್ಣವಾಗಿ ಹಾನಿಯಾಗಿರುವುದನ್ನು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಮುಂದೆ ಪ್ರಸ್ತಾಪಿಸಲಾಯಿತು. ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ನಿರ್ದೇಶಕ ಮಲ್ಲು ಜೋಗೂರ, ಕೆ.ಪಿ.ಆರ್. ಓ ಆದ ಪಾರ್ಥಿವನ್ ಅವರು ಕೂಡಾ ರೈತರ ಬೆಳೆಗೆ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂಪೂರ್ಣ ಭರವಸೆ ನೀಡಿದ್ದಾರೆ.

j3tvkannada
ಮುಂದಿನ ದಿನಗಳಲ್ಲಿ ಕಾರ್ಖಾನೆಯಿಂದ ಹೊರ ಸೂಸುವ ಬೂದಿಯನ್ನು ನಿಯಂತ್ರಿಸುತ್ತೇವೆ. ಬೂದಿ ಹೊರ ಸೂಸುವುದನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುತ್ತೇವೆ. ಯಾವುದೇ ತೆರನಾಗಿ ಕಾರ್ಖಾನೆಯಿಂದ ಬೂದಿಯನ್ನು ಬೀಳದೆ ಇರುವ ಹಾಗೇ ನೋಡಿಕೊಳ್ಳುತ್ತೇವೆ. ಒಂದು ವೇಳೆ ದ್ರಾಕ್ಷಿ ಬೆಳೆಯ ಮೇಲೆ ಬೂದಿ ಏನಾದರೂ ಬಿದ್ದರೆ ಸೂಕ್ತವಾದ ಪರಿಹಾರವನ್ನು ಕೊಡುತ್ತೇವೆ ಎಂದು ಸಂಪೂರ್ಣ ಭರವಸೆ ನೀಡಿದ್ದಾರೆ. ಆದ ಕಾರಣ ಅಲ್ಲಿವರೆಗೂ ನಾವೆಲ್ಲರೂ ತಾಳ್ಮೆಯಿಂದ ಇರುವೆವು ಎಂದು ರೈತ ಮುಖಂಡರು ತಿಳಿಸಿದರು.
ಒಂದು ವೇಳೆ ಮತ್ತೆ ಯಥಾ ಸ್ಥಿತಿ ಮುಂದುವರೆದರೆ ಮತ್ತು ಪರಿಹಾರವನ್ನು ನೀಡದಿದ್ದರೆ ಕಾರ್ಖಾನೆಗೆ ಬೀಗ ಜಡಿಯುತ್ತೇವೆ ಎಂದು ಎಚ್ಚರಿಕೆ ನೀಡಲಾಯಿತು. ದ್ರಾಕ್ಷಿ ಬೆಳೆಗಾರರಾದ ಬಾಬು ಬಿಜ್ಜರಗಿ ಸದಾನಂದ ಕಲಶೆಟ್ಟಿ, ಭೀಮು ಬೊಮ್ಮನಹಳ್ಳಿ, ಶಿರಾಜ್ ಬೆಣ್ಣೆಶಿರೂರು, ಮಹೆಬೂಬ್ ಸೌದಾಗರ, ಸಿದ್ದು ಗೊಂದಳ್ಳಿ, ಬಾಬುಗೌಡ ನೇಲಗಿ, ಸುರೇಶ ಭಾಸ್ಗಿ, ಅಶೋಕ ಸದ್ಲಾಪುರ, ಮೆಹಬೂಬ್ ಮೋಪಗಾರ, ಪ್ರಭು ದೇಸಾಯಿ, ಅಲ್ಲಾಭಕ್ಷ ನಧಾಪ, ಸಂಗಣ್ಣ ಚನ್ನೂರು, ಸುರೇಶ ಬಿರಾದಾರ, ಜಟ್ಟೆಪ್ಪ ಪೂಜಾರಿ, ಶಂಕರಗೌಡ ಹಿರೇಗೌಡರ ಮತ್ತಿತರರು ಸಭೆಯಲ್ಲಿ ಇದ್ದರು.