
ವಿಜಯನಗರ:ದೇಹದಲ್ಲಿರುವ ಕೊಬ್ಬಿನಾಂಶ ನಿವಾರಣೆ ಸೇರಿದಂತೆ ಇತರೆ ಖಾಯಿಲೆಗಳು ಬರದಂತೆ ದೂರವಿಡಲು ಮುನ್ನೆಚ್ಚರಿಕೆಯಾಗಿ ಉತ್ತಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಾಹಿತಿ ಭೀಮಣ್ಣ ಗಜಾಪುರ ಹೇಳಿದರು.

j3tvkannada
ಗಜಾಪುರ ಗ್ರಾಮದಲ್ಲಿ ತಿಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಗಜಾಪುರ ಆರೋಗ್ಯ ಉಪಕೇಂದ್ರ, ಹೊಸಪೇಟೆಯ ಚಿರಂಜೀವಿ ಬ್ಲಡ್ ಬ್ಯಾಂಕ್, ಕಂದಗಲ್ಲು ಗ್ರಾಮ ಪಂಚಾಯ್ತಿ ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಂದಗಲ್ಲು ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ತಳವಾರ ಮೂಗಪ್ಪ ಮಾತನಾಡಿ, ರಕ್ತದಾನಿಗಳು ಮಾಡುವ ಸಹಾಯ ಎಲ್ಲಾ ಸಹಾಯಗಳಿಗಿಂತ ಶ್ರೇಷ್ಠವಾದ ಸಹಾಯವಾಗಿದ್ದು, ಆರೋಗ್ಯವಂತರಾದ ಎಲ್ಲರೂ ರಕ್ತದಾನ ಮಾಡುವುದರ ಮೂಲಕ ಇಂತಹ ಶಿಬಿರಗಳನ್ನು ಯಶಸ್ವಿ ಮಾಡಬೇಕೆಂದು ತಿಳಿಸಿದರು. ಗಜಾಪುರ ಗ್ರಾಮ ಪಂಚಾಯಿತಿ ಸದಸ್ಯ ಅಡ್ಡಂಗಡಿ ರಾಜಣ್ಣ ಮಾತನಾಡಿ ರಕ್ತದಾನದಂತಹ ಶಿಬಿರಗಳು ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿಯೂ ಯಶಸ್ವಿಯಾಗಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಿಸ್ವಾರ್ಥವಾಗಿ ಮಾಡಿದ ರಕ್ತದಾನ ನಿಸ್ವಾರ್ಥ ಸೇವೆಗೆ ಉಪಯೋಗವಾಗಬೇಕಿದೆ ಈ ಬಗ್ಗೆ ಆರೋಗ್ಯಾಧಿಕಾರಿಗಳು, ವೈದ್ಯಕೀಯ ಸಿಬ್ಬಂಧಿ ಬಡ ಜನತೆಗೆ ಕಷ್ಠದ ಸಮಯದಲ್ಲಿ ರಕ್ತವನ್ನು ಸುಲಭವಾಗಿ ಸಿಗುವಂತೆ ಮತ್ತಷ್ಟು ಸಾಮಾನ್ಯ ಜನತೆಗೆ ಸಿಗುವಂತೆ ಮಾಡಬೇಕಿದೆ ಎಂದರು.
41 ಯುವಕರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಕಂದಗಲ್ಲು ಗ್ರಾಮ ಪಂಚಾಯ್ತಿ ಪಿ.ಡಿ.ಓ ಕೆ. ಮಾರುತೇಶ್, ಗಜಾಪುರ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೊಂದಲಿಗರ ಕೊಟ್ರೇಶ್, ಗ್ರಾಮದ ಯುವ ಮುಖಂಡರಾದ ವಿ.ನಾಗರಾಜ, ಹೆಚ್.ಅಂಜಿನಪ್ಪ ಗ್ರಾಮ ಪಂಚಾಯ್ತಿ ಸದಸ್ಯರಾದ ಕೇಂದ್ರಮ್ಮ, ರತ್ನಮ್ಮಅಂಜಿನಪ್ಪ, ಕುಪ್ಪಿನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಫೀಕ್ ಅಹಮದ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ಕೆ.ಸುನೀತಾ, ಸಮುದಾಯ ಆರೋಗ್ಯಾಧಿಕಾರಿ ಟಿ.ಕವಿತಾ, ಆಶಾ ಕಾರ್ಯಕರ್ತೆಯರಾದ ರತ್ನಮ್ಮ, ಗಂಗಮ್ಮ, ತಿಪ್ಪಕ್ಕ, ಲಕ್ಷ್ಮಮ್ಮ, ಹರಾಳು ಸವಿತಾ ಗ್ರಾಮದ ಯುವಕರು ಗ್ರಾಮಸ್ಥರು ಹಾಜರಿದ್ದರು.