
ಉತ್ತರ ಕನ್ನಡ: ಶಿರಸಿ ನಗರದ ಹಲವು ಕಡೆಗಳಲ್ಲಿಯ ಸರ್ಕಲ್ ಗಳು ಧುತ್ತನೆ ವಾಹನವನ್ನು ನಿಲ್ಲಿಸುವಂತೆ ಮಾಡುತ್ತವೆ. ಈಗಲೇ ಹೊಸದಾಗಿ ಆರಂಭವಾಗಿರುವ ಟ್ರಾಫಿಕ್ ಸ್ಟೇಷನ್ ಇದೆ ಟ್ರಾಫಿಕ್ ಪೊಲೀಸ್ ತಡೆಯುತ್ತಾರೆ ಎಂದಲ್ಲ ಸರ್ಕಲ್ ಗಳ ರಸ್ತೆ ಮಧ್ಯೆ ಇರುವ ಹೊಂಡದಿಂದಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು.

j3tvkannada
ವೇಗವಾಗಿ ಬಂದ ವಾಹನಗಳು ಹೊಂಡ ಕಂಡು ಬ್ರೇಕ್ ಹಾಕುತ್ತಿದ್ದವು. ಇದರಿಂದ ಹಿಂಬದಿಯ ಸವಾರರು ಮುಗ್ಗರಿಸುವಂತಾಗುತ್ತಿತ್ತು. ಅಲ್ಲದೇ ಟ್ರಾಫಿಕ್ ಒತ್ತಡವಾಗುತ್ತಿತ್ತು. ನಗರದ ಅಶ್ವಿನಿ ಸರ್ಕಲ್ ನ ರಸ್ತೆಯಲ್ಲಿನ ಹೊಂಡದಿಂದ ಸವಾರರು ಪರದಾಡುವುದನ್ನು ಕಂಡ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಾಘವೇಂದ್ರ ನಾಯ್ಕ ತಾವೇ ಕಲ್ಲುಗಳನ್ನು ಹೆಕ್ಕಿ ತಂದು ಹೊಂಡ ಮುಚ್ಚುತ್ತಿರುವುದು ಕಂಡು ಬಂತು. ಈ ಕುರಿತು ರಾಘವೇಂದ್ರ ಅವರನ್ನು ಕೇಳಿದರೆ ಇಲ್ಲಿಯ ಸರ್ಕಲ್ ನಲ್ಲಿ ನಾನು ನಿಂತಿರುತ್ತೇನೆ ವಾಹನ ಸವಾರರ ಪರದಾಟ ನೋಡುವುದಕ್ಕೆ ಅಗಲಿಲ್ಲ ಅದಕ್ಕೆ ಹೀಗೆ ಮಾಡಿದೆ ಎಂದು ಹೇಳಿದ್ದಾರೆ.
ನನ್ನ ಹೆಸರು ಹೇಳಿಕೆ ಎಲ್ಲ ಹಾಕುವುದು ಬೇಡ. ಸಣ್ಣ ಕೆಲಸ ಇದು ಎಂದು ಮಾಡಿದ ಕಾರ್ಯಕ್ಕೆ ಪ್ರಶಂಸೆ ಪಡೆಯಲೂ ಸಹ ಸಿದ್ದರಿರಲಿಲ್ಲ. ಏನೇ ಆಗಲಿ ಸುಗಮ ಸಂಚಾರ ವ್ಯವಸ್ಥೆಯ ಉದ್ದೇಶ ದಿಂದ ಕರ್ತವ್ಯ ನಿರತ ಸಿಬ್ಬಂದಿಯ ಈ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.