
ಕಲಬುರಗಿ: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಇತ್ತೀಚೆಗೆ ಜಿಲ್ಲೆಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿ ಬದಲಾಗಿ ಪಿಯುಸಿ, ರಾಜ್ಯಶಾಸ್ತ್ರ ಪರೀಕ್ಷೆ ಬರೆದಿದ್ದ ಕಾಂಗ್ರೆಸ್ ಕಾರ್ಯಕರ್ತೆ ಪ್ರಕರಣದ ವಿಚಾರಣೆ ನಡೆದಿದೆ. ಇಲ್ಲಿನ ನಾಲ್ಕನೇ ಜಿಎಂಎಫ್ಸಿ ನ್ಯಾಯಾಲಯವು ಮಂಗಳವಾರ ಕೈ ಕಾರ್ಯಕರ್ತೆ ಸಂಪೂರ್ಣ ಪಾಟೀಲ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಕೋರ್ಟ್ ಆದೇಶಿಸಿದೆ.

ಮಿಲಿಂದ್ ಕಾಲೇಜಿನಲ್ಲಿ ಈ ಘಟನೆ ಮಾರ್ಚ್ 05 ರಂದು ನಡೆದಿತ್ತು. ಅಂದು ರಾಜ್ಯಶಾಸ್ತ್ರ ಪರೀಕ್ಷೆಯನ್ನು ವಿದ್ಯಾರ್ಥಿನಿ ಅರ್ಚನಾ ಬರೆಯಬೇಕಿತ್ತು. ಆದರೆ ಅವರ ಬದಲಾಗಿ ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣ ಪಾಟೀಲ್ ಬರೆದಿದ್ದರು. ಈ ಬಗ್ಗೆ ದಲಿತ ಸೇನೆ ಖಚಿತ ಮಾಹಿತಿ ಪಡೆದು ಪ್ರತಿರೋಧ ಒಡ್ಡಿದ್ದರು. ಕೂಡಲೇ ಪ್ರಾಂಶುಪಾಲರು ಸ್ಥಳೀಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.