
ಬಾಗಲಕೋಟೆ: ಜಮೀನಿನ ಸೀಮೆಯ ವಿಷಯವಾಗಿ ತಾಲೂಕಿನ ಸಂಗಾನಟ್ಟಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವಿನ ವಿವಾದ ವಿಕೋಪಕ್ಕೆ ತಿರುಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಾಗ ಜಗಳ ಬಿಡಿಸಲು ಹೋದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

j3tvkannada
ಸಂಗಾನಟ್ಟಿ ಗ್ರಾಮದ ನಿವಾಸಿ ಪರಪ್ಪ ಮಲ್ಲಪ್ಪ ನಾಗನೂರ (೪೯) ಮೃತ ವ್ಯಕ್ತಿ. ಸಂಗಾನಟ್ಟಿ ಗ್ರಾಮದ ಹಣಮಂತ ಶಂಕ್ರೆಪ್ಪ ನಾಗನೂರ, ಮಹಾನಿಂಗ ಹಣಮಂತ ನಾಗನೂರ, ದಾನವ್ವ ಹ. ನಾಗನೂರ ಆರೋಪಿಗಳು. ಹಣಮಂತ ನಾಗನೂರು ಹಾಗೂ ಅಳಿಯ ಮಹಾನಿಂಗ ಬಸಪ್ಪ ವಗ್ಗರ ಮಧ್ಯೆ ಜಮೀನಿನ ಸೀಮೆಯ ವಿಷಯವಾಗಿ ವಿವಾದ ಇತ್ತು. ಇದೇ ವಿಷಯವಾಗಿ ಎರಡು ಕುಟುಂಬಗಳ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ.
ಈ ವೇಳೆ ಆರೋಪಿತರಾದ ಹನುಮಂತ ನಾಗನೂರ, ಮಹಾನಿಂಗ ನಾಗನೂರ ಇವರು ಮಹಾನಿಂಗ ವಗ್ಗರ ಮೇಲೆ ಬಡಿಗೆಯಿಂದ ಹಲ್ಲೆ ಮಾಡಿದ್ದು, ಈ ವೇಳೆ ಹಲ್ಲೆ ತಡೆಯಲು ಬಂದ ಗಂಗಪ್ಪ ನಾಗನೂರರ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿದ್ದಾರೆ, ಈತನ ಸಹೋದರ ಪರಪ್ಪ ಮಲ್ಲಪ್ಪ ನಾಗನೂರ (19) ಅವನಿಗೆ ಹನುಮಂತ ನಾಗನೂರು ಬಡಿಗೆಯಿಂದ ಹಲ್ಲೆ ನಡೆಸಿದ್ದಾನೆ.
ಗಂಭೀರ ಗಾಯಗೊಂಡಿದ್ದ ಪರಪ್ಪ ನಾಗನೂರ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮಹಾಲಿಂಗಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.