
ರಾಮನಗರ: ಅರೆ ಹೊಸಹಳ್ಳಿ ಗ್ರಾಮದ ಸಿದ್ದರಾಮೇಗೌಡ, ಮಹದೇವಯ್ಯ, ಕೃಷ್ಣಮೂರ್ತಿ, ಮಹೇಶ್ ಎಂಬ ರೈತರ ಕೊಳವೆ ಬಾವಿಗಳ ವಿದ್ಯುತ್ ಸರಬರಾಜು ಮಾಡುವ ಕೇಬಲ್ಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

j3tvkannada
ರೈತರು ಗ್ರಾಮದ ಹೊರಭಾಗದಲ್ಲಿತಮ್ಮ ಜಮೀನುಗಳ ವ್ಯವಸಾಯ ಮಾಡಲು ಕೊಳವೆ ಬಾವಿಗಳಲ್ಲಿ ವಿದ್ಯುತ್ ಸರಬರಾಜು ಮಾಡಲು ಅಳವಡಿಸಿದ್ದ, ಅಕ್ಕ ಪಕ್ಕದ ರೈತರ ನಾಲ್ಕು ಕೊಳವೆ ಬಾವಿಗಳ ಕೇಬಲ್ಗಳನ್ನು ಸುಮಾರು 50 ಮೀಟರ್ ದೂರದ ಅಂತರದಲ್ಲಿ ಮಿಷಿನ್ ಮನೆಗಳ ಹತ್ತಿರದಿಂದ ಕೊಳವೆ ಬಾವಿಗಳ ಮೋಟಾರ್ಗಳಲ್ಲಿದ್ದ ಕೇಬಲ್ಗಳನ್ನು ಸಂಪೂರ್ಣವಾಗಿ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ.
ಇದರಿಂದ ಒಬ್ಬೊಬ್ಬ ರೈತರಿಗೆ ಸುಮಾರು ಹತ್ತು ಸಾವಿರ ಮೌಲ್ಯದ ಕೇಬಲ್ಗಳಂತೆ ಒಟ್ಟು ಎಲ್ಲಾ ರೈತರ 50,000 ಮೌಲ್ಯದ ಕೇಬಲ್ಗಳನ್ನು ಕಳ್ಳತನ ಮಾಡಿದ್ದಾರೆ. ರೈತರು ತಮ್ಮ ಜಮೀನುಗಳಿಗೆ ಕೊಳವೆ ಬಾವಿಗಳ ಮುಖಾಂತರ ನೀರನ್ನು ಹಾಯಿಸಲು ನೋಡಿದ ಸಂದರ್ಭದಲ್ಲಿ, ನಾಲ್ಕು ಕೊಳವೆ ಬಾವಿಗಳ ಕೇಬಲ್ಗಳನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ರೈತರು ಕೊಳವೆ ಬಾವಿಗಳ ಮೋಟಾರ್ಗಳನ್ನು ಮೇಲೆತ್ತಿ ಪುನಃ ಹೊಸದಾಗಿ ಕೇಬಲ್ಗಳನ್ನು ಅಳವಡಿಸುವುದರಿಂದ ಒಬ್ಬೊಬ್ಬ ರೈತರಿಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಖರ್ಚು ತಗುಲಲಿದೆ ಎಂದು ತಿಳಿದು ಬಂದಿದೆ.